Advertisement

ಪೌರತ್ವ ಗಲಭೆಗಳ ಹಿಂದೆ ಕೈ ನಾಯಕರ ಷಡ್ಯಂತ್ರ : ಶಾಸಕ‌ ‌ಸುಧಾಕರ್ ಟೀಕೆ

10:27 AM Dec 22, 2019 | sudhir |

ಚಿಕ್ಕಬಳ್ಳಾಪುರ: ಪೌರತ್ವ ತಿದ್ದುಪಡಿ ಮಸೂದೆ ವಿರುದ್ದ ನಡೆಯುತ್ತಿರುವ ಹಿಂಸಾಚಾರ ಹಾಗೂ ಗಲಭೆಗಳ ಹಿಂದೆ ಕಾಂಗ್ರೆಸ್ ನಾಯಕರ ಕೈವಾಡವಿದೆ ಎಂದು‌‌‌ ಚಿಕ್ಕಬಳ್ಳಾಪುರ ಶಾಸಕ‌ ಡಾ.ಕೆ.ಸುಧಾಕರ್ ಟೀಕಿಸಿದರು.

Advertisement

ಚಿಕ್ಕಬಳ್ಳಾಪುರ ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕೀಯವಾಗಿ ಹತಾಶರಾಗಿ ಕಾಂಗ್ರೆಸ್ ನಾಯಕರು ಬಿಜೆಪಿಗೆ ಕೆಟ್ಟ ಹೆಸರು ತರಲು ಗಲಭೆಗಳನ್ನು ನಡೆಸಲು‌ ಷಡ್ಯಂತ್ರ ನಡೆಸಿದ್ದಾರೆ ಎಂದರು. ಬಿಜೆಪಿ ಅಧಿಕಾರ ಇರುವ ರಾಜ್ಯಗಳಲ್ಲಿಯೆ ಏಕೆ ಈ ರೀತಿ ಹಿಂಸಾಚಾರ, ಗಲಭೆಗಳು ನಡೆಯುತ್ತಿವೆ. ಕಾಂಗ್ರೆಸ್ ಅಧಿಕಾರದಲ್ಲಿರುವ ಮದ್ಯ ಪ್ರದೇಶ, ರಾಜಸ್ಥಾನ ಮತ್ತಿತರ ಕಡೆ ಏಕೆ ಗಲಭೆಗಳು ನಡೆಯುತ್ತಿಲ್ಲ. ಬರೀ ಬಿಜೆಪಿ ಅಧಿಕಾರ ಇರುವ ಕರ್ನಾಟಕ, ಉತ್ತರ ಪ್ರದೇಶ ಹಾಗೂ ಅಸ್ಸಾಂನಲ್ಲಿ ಗಲಭೆಗಳು ನಡೆಯಲು ಕಾಂಗ್ರೆಸ್ ಕಾರಣ ಎಂದರು. ಮಂಗಳೂರಿನಲ್ಲಿ ಘಟನೆಗೆ ಕಾಂಗ್ರೆಸ್ ನಾಯಕರೇ ಕಾರಣ 144 ಸೆಕ್ಷನ್ ಜಾರಿಯಲ್ಲಿದ್ದರೂ ಅಲ್ಲಿಗೆ ಕಾಂಗ್ರೆಸ್ ನಾಯಕರು ಏಕೆ ಹೋಹಬೇಕು. ಇವರು ಬೆಂಕಿ ಆರಿಸುವುದಕ್ಕಿಂತ ಎಲ್ಪಿಜಿ ಹಾಕಿ ಇನ್ನಷ್ಟು ಬೆಂಕಿ‌ ಉರಿಸಲಿಕ್ಕೆ ಹೋಗಿದ್ದಾರೆ ಎಂದರು. ಪೌರತ್ವ ತಿದ್ದುಪಡಿ ಮಸೂದೆಯಿಂದ ಯಾರು ಆತಂಕ ಪಡಯವ ಅಗತ್ಯವಿಲ್ಲ. ಈ ವಿಚಾರದಲ್ಲಿ ಕಾಂಗ್ರೆಸ್ ನಾಯಕರು ಜನರಲ್ಲಿ ಗೊಂದಲ ಸೃಷ್ಟಿಸಲು ಮುಂದಾಗಿದ್ದಾರೆಂದು ಸುಧಾಕರ್ ಕಿಡಿಕಾರಿದರು.

Advertisement

Udayavani is now on Telegram. Click here to join our channel and stay updated with the latest news.

Next