Advertisement

ಹಿರಿಯ‌ ಪತ್ರಕರ್ತ ಅಶೋಕ ಹಾಸ್ಯಗಾರರಿಗೆ ಕೆ.ಶಾಮರಾವ್ ಪ್ರಶಸ್ತಿ ಪ್ರದಾನ

04:29 PM Jul 01, 2022 | Team Udayavani |

ಶಿರಸಿ: ಉತ್ತರ ಕನ್ನಡ‌ ಜಿಲ್ಲಾ‌ಕಾರ್ಯನಿರತ ಪತ್ರಕರ್ತರ‌ ಸಂಘ ನೀಡುವ ಕೆ.ಶಾಮರಾವ್ ಪ್ರಶಸ್ತಿಯನ್ನು ನಗರದ ಟಿಎಂಎಸ್ ಸಭಾಂಗಣದಲ್ಲಿ ಶುಕ್ರವಾರ ಹಿರಿಯ‌ ಪತ್ರಕರ್ತ ಅಶೋಕ ಹಾಸ್ಯಗಾರ ಅವರಿಗೆ ಪ್ರದಾನ ಮಾಡಲಾಯಿತು.

Advertisement

ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತ ಹಿರಿಯ ಪತ್ರಕರ್ತರಾದ ಎಂ.ಕೆ.ಭಾಸ್ಕರ ರಾವ್, ಟಿ.ಎಂ.ಸುಬ್ಬರಾಯ ಅವರು ಪ್ರಶಸ್ತಿ‌ ಪುರಸ್ಕೃತ ಅಶೋಕ ಹಾಸ್ಯಗಾರ ಅವರಿಗೆ ಪ್ರಶಸ್ತಿ‌ ಪ್ರದಾನ ಮಾಡಿದರು.

ಸಂಘದ ಜಿಲ್ಲಾಧ್ಯಕ್ಷ ಜಿ.ಸುಬ್ರಾಯ ಭಟ್ ಬಕ್ಕಳ ಅಧ್ಯಕ್ಷತೆವಹಿಸಿಕೊಂಡಿದ್ದರು. ರಾಜ್ಯ ಘಟಕದ ಕಾರ್ಯದರ್ಶಿ ನಿಂಗಪ್ಪ ಚಾವಡಿ, ರಾಜ್ಯ ಕಾರ್ಯಕಾರಿಣಿ ಸದಸ್ಯ ಬಸವರಾಜ ಪಾಟೀಲ್, ಪ್ರಧಾನ ಕಾರ್ಯದರ್ಶಿ ಸುಮಂಗಲಾ ಹೊನ್ನೆಕೊಪ್ಪ, ಉಪಾಧ್ಯಕ್ಷ ನಾಗರಾಜ ಹೆಗಡೆ, ಕಾರ್ಯದರ್ಶಿಗಳಾದ ಅನಂತ‌ ದೇಸಾಯಿ, ನರಸಿಂಹ ಸಾತೊಡ್ಡಿ,ಖಜಾಂಚಿ ರಾಜೇಂದ್ರ ಸಿಂಗನಮನೆ, ಹಾಸ್ಯಗಾರ ಅವರ‌ ಶ್ರೀಮತಿ ಸುನಂದಾ ಹಾಸ್ಯಗಾರ ಇತರರು‌ ಇದ್ದರು. ರಾಘವೇಂದ್ರ ಬೆಟ್ಟಕೊಪ್ಪ ನಿರ್ವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next