Advertisement

‘ಅರ್ಥಪೂರ್ಣ ಕೆಲಸದಿಂದ ಅರ್ಥಪೂರ್ಣ ಬದುಕು’

03:20 AM Jul 03, 2017 | Karthik A |

ಕಾರ್ಕಳ: ಬದಲಾವಣೆಯೊಂದಿಗೆ ಅನುಭವ ಗಳಿಕೆ ಇಂದಿನ ಸವಾಲು. ಅರ್ಥಪೂರ್ಣ ಬದುಕನ್ನು ಸಾಗಿಸಲು ಅರ್ಥಪೂರ್ಣ ಕೆಲಸಗಳೇ ಮುಖ್ಯವಾಗುತ್ತವೆ ಎಂದು ರಂಗಭೂಮಿ ಹಾಗೂ ಚಿತ್ರೋದ್ಯಮಿ ಬೆಂಗಳೂರಿನ ಪ್ರಕಾಶ ಬರೆ ಹೇಳಿದ್ದಾರೆ. ಅವರು ನಿಟ್ಟೆ ಜಸ್ಟಿಸ್‌ ಕೆ.ಎಸ್‌. ಹೆಗ್ಡೆ ಉದ್ಯಮಾಡಳಿತ ಸಂಸ್ಥೆಯ ಸಭಾಭವನದಲ್ಲಿ ಶನಿವಾರ ಉದ್ಯಮಾಡಳಿತ ವಿದ್ಯಾರ್ಥಿಗಳಿಗೆ ಪದವಿ ಪ್ರದಾನಗೈದು ಘಟಿಕೋತ್ಸವ ಭಾಷಣ ಮಾಡಿದರು.

Advertisement

ಉದ್ಯೋಗದ ಕಲ್ಪನೆ ಇಂದು ಬದಲಾಗುತ್ತಿದೆ. ವಿಸ್ತಾರವಾದ ಅವಕಾಶಗಳಿಗೆ ವಿದ್ಯಾರ್ಥಿಗಳು ಸಿದ್ಧರಾಗಿರಬೇಕು. ಬಹು ಕೌಶಲಗಳನ್ನು ಬಳಸಿಕೊಳ್ಳಲು ಇಂದು ಅವಕಾಶವಿದೆ. ಜಾಗತೀಕರಣ ನಮ್ಮ ಮುಂದೆ ಅನೇಕ ಸವಾಲುಗಳನ್ನು ಒಡ್ಡುತ್ತಿದೆ. ಹೀಗಾಗಿ ಬದುಕಿನ ಯಶಸ್ಸು ವೈಫಲ್ಯದಿಂದಲೆ ಉದ್ಯಮಾಡಳಿತದ ವಿದ್ಯಾರ್ಥಿಗಳು ಹೊಸ ಚಿಂತನಾ ಕ್ರಮಗಳನ್ನು ಬೆಳೆಸಿಕೊಳ್ಳಬೇಕು. ಇಂದು ಒಂದೇ ಉದ್ಯಮ ನಡೆಸಬೇಕಾಗಿಲ್ಲ. ವಿಶೇಷವಾದ ಸಾಧನೆಯ ಅವಕಾಶಗಳನ್ನು ತನ್ನದಾಗಿಸಿಕೊಳ್ಳುವ ಮೂಲಕ ಬದುಕನ್ನು ಅರ್ಥಪೂರ್ಣವಾಗಿಸಿಕೊಳ್ಳಬಹುದು. ಹೆತ್ತವರಿಗೆ, ಪೋಷಕರಿಗೆ ತನ್ಮೂಲಕ ಸಮಾಜಕ್ಕೆ ಕೃತಜ್ಞರಾಗಬಹುದು ಎಂದವರು ಹೇಳಿದರು. ಅದರಿಂದ ಪಾಠ ಕಲಿತು ಮುಂದೆ ಬರಲು ಸಾಧ್ಯ ಎಂದರು.

ಜಸ್ಟಿಸ್‌ ಕೆ.ಎಸ್‌. ಹೆಗ್ಡೆ ಉದ್ಯಮಾಡಳಿತ ಸಂಸ್ಥೆಯ ನಿರ್ದೇಶಕ ಡಾ| ಕೆ. ಶಂಕರನ್‌ ಸ್ವಾಗತಿಸಿ, ಪ್ರತಿಜ್ಞಾವಿಧಿ ಬೋಧಿಸಿದರು. ಡಾ| ಎನ್‌.ಎಸ್‌. ಶೆಟ್ಟಿ, ಎನ್‌.ಎಂ.ಎ.ಎಂ. ತಾಂತ್ರಿಕ ಕಾಲೇಜಿನ ಪ್ರಾಂಶುಪಾಲ ಡಾ| ನಿರಂಜನ್‌ ಚಿಪ್ಳೂಣ್ಕರ್‌, ಉಪಪ್ರಾಂಶುಪಾಲ ಡಾ| ಶ್ರೀನಿವಾಸ ರಾವ್‌ ಬಿ.ಆರ್‌, ಡಾ| ಸುಧೀರ್‌ ಎಂ., ಡಾ| ಆಶಾಲತಾ ಕೆ, ರಾಕೇಶ್‌ ಶೆಟ್ಟಿ, ಐಸಾಕ್‌ ವರ್ಗೀಸ್‌, ಕೃಷ್ಣಪ್ರಸಾದ್‌, ಹರಿಶ್ಚಂದ್ರ, ಜ್ಞಾನೇಶ್ವರ ಪೈ, ಸಂಧ್ಯಾ ರಾವ್‌, ರೀಟಾ ಮೊನಿ ಬೊರೊ, ಶೀತಲ್‌ ಕುಮಾರ್‌ ಉಪಸ್ಥಿತರಿದ್ದರು. ಡಾ| ಸುಧೀರರಾಜ್‌ ನಿರೂಪಿಸಿದರು. ಪ್ರೊ| ರಾಧಾಕೃಷ್ಣ ಶರ್ಮ ವಂದಿಸಿದರು. ಈ ಸಂದರ್ಭದಲ್ಲಿ ಉದ್ಯಮಾಡಳಿತ ಪರೀಕ್ಷೆಯಲ್ಲಿ ಗರಿಷ್ಠ ಅಂಕಗಳಿಸಿ ಅತ್ಯುತ್ತಮ ಉದ್ಯಮಾಡಳಿತ ಪ್ರಾಜೆಕ್ಟ್ಗಾಗಿ ಮೊದಲ ಸ್ಥಾನ ಪಡೆದವರಿಗೆ ಹಾಗೂ ಹೊರ ತೆರಳುವ ಅತ್ಯುತ್ತಮ ವಿದ್ಯಾರ್ಥಿಗಳನ್ನು ಅರ್ಹತಾ ಪತ್ರ ನೀಡಿ ಅಭಿನಂದಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next