Advertisement

Congress ಹಾಳಾಗಿ ಹೋಗಲಿದೆ: ಕೆ.ಎಸ್‌. ಈಶ್ವರಪ್ಪ

11:41 PM Apr 24, 2023 | Shreeram Nayak |

ಶಿವಮೊಗ್ಗ: ಸಿದ್ದರಾಮಯ್ಯ ವರುಣಾದಲ್ಲಿ ಗೆಲ್ಲಲಾರರು. ಅವರು ಮುಖ್ಯಮಂತ್ರಿಯೂ ಆಗುವುದಿಲ್ಲ. ಕೋಲಾರದಲ್ಲಿ ಟಿಕೆಟ್‌ ಸಿಗಲಿಲ್ಲ. ನಾನಂತು ಹಾಳಾಗಿ ಹೋಗಿದ್ದೇನೆ. ಕಾಂಗ್ರೆಸ್‌ ಕೂಡ ಸಂಪೂರ್ಣ ಹಾಳಾಗಿ ಹೋಗಲಿ ಎಂಬ ಉದ್ದೇಶದಿಂದಲೇ ಅನೇಕ ಹೇಳಿಕೆಗಳನ್ನು ಕೊಡುತ್ತಿದ್ದಾರೆ. ಆದ್ದರಿಂದ ಕಾಂಗ್ರೆಸ್‌ ಹಾಳಾಗಿ ಹೋಗಲಿದೆ ಮಾಜಿ ಸಚಿವ ಕೆ.ಎಸ್‌. ಈಶ್ವರಪ್ಪ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಹುಲ್‌ ಗಾಂಧಿ ರಾಹು ಇದ್ದ ಹಾಗೆ ಎಂದು ಅವರದೇ ಪಕ್ಷದ ಒಂದು ಗುಂಪು ಹೇಳುತ್ತಿದೆ. ರಾಹುಲ್‌ ಶಿವಮೊಗ್ಗಕ್ಕೆ ಕಾಲಿಟ್ಟು ಹೋದರೆ ಸಾಕು, ಇಲ್ಲಿ ಬಿಜೆಪಿ ಗೆದ್ದಂತೆ. ಲಿಂಗಾಯತ ಸಮಾಜ ಬಿಜೆಪಿ ಕಡೆ ಇದೆ. ಇದನ್ನು ರಾಹುಲ್‌ ಗಾಂಧಿ ಯೇ ಒಪ್ಪಿಕೊಂಡಂತಾಗಿದೆ. ಕಳೆದ ಬಾರಿ ಶಿವಮೊಗ್ಗದಲ್ಲಿ 46 ಸಾವಿರ ಮತಗಳ ಅಂತರದಲ್ಲಿ ಗೆಲ್ಲಲಾಗಿತ್ತು. ರಾಹುಲ್‌ ಬಂದರೆ ಈ ಬಾರಿ 60 ಸಾವಿರ ಅಂತರದಲ್ಲಿ ಗೆಲ್ಲಲು ಸಹಕಾರಿ ಆಗಲಿದೆ. ನಾನು ಮಂಗಳವಾರದಿಂದ ಮೇ 7ರ ವರೆಗೆ ರಾಜ್ಯ ಪ್ರವಾಸ ಮಾಡುತ್ತೇನೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next