Advertisement

ಪುರಸಭೆ ನೂತನ ಅಧ್ಯಕ್ಷರಾಗಿ ಕೆ.ಮಹೇಶ್ ಅವಿರೋಧ ಆಯ್ಕೆ

05:50 PM Apr 21, 2022 | Team Udayavani |

ಪಿರಿಯಾಪಟ್ಟಣ: ಇಲ್ಲಿನ  ಪುರಸಭೆಗೆ ನೂತನ ಅಧ್ಯಕ್ಷರಾಗಿ  ಕೆ.ಮಹೇಶ್  ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ.

Advertisement

ಈ ಹಿಂದೆ ಮೊದಲನೇ ಅವಧಿಗೆ ಅಧ್ಯಕ್ಷರಾಗಿದ್ದ ಮಂಜುನಾಥ್ ಸಿಂಗ್  ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಸ್ಥಾನ ತೆರವಾಗಿತ್ತು. ಆದರೆ ಇಂದು ಜೆಡಿಎಸ್ ಬೆಂಬಲಿತ ಅಭ್ಯರ್ಥಿಯಾಗಿ ಮಹೇಶ್  ನಾಮಪತ್ರ ಸಲ್ಲಿಸಿದರು  ಚುನಾವಣೆಯಲ್ಲಿ ಕಾಂಗ್ರೆಸ್ಸಿನ ಸದಸ್ಯರು  ಬಹುಮತ ಇಲ್ಲದ ಕಾರಣ ಯಾರು ನಾಮಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿಯಾಗಿ ಕೆಲಸ ನಿರ್ವಹಿಸಿದ ತಹಶೀಲ್ದಾರ್ ಕೆ.ಚಂದ್ರಮೌಳಿಯವರು ಅಧ್ಯಕ್ಷರಾಗಿ ಕೆ.ಮಹೇಶ್ ಆಯ್ಕೆಯನ್ನು ಘೋಷಿಸಿದರು.

ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಕೆ ಮಹೇಶ್  ಮಾತನಾಡಿ ಶಾಸಕ ಕೆ.ಮಹದೇವ್ ಹಾಗೂ ಮೈಮುಲ್ ಅಧ್ಯಕ್ಷ ಪ್ರಸನ್ನರವರ ಮತ್ತು ಸದಸ್ಯರುಗಳ ಸೂಚನೆಯತೆ ಎಲ್ಲರನ್ನು ವಿಶ್ವಾಸ ತೆಗೆದುಕೊಂಡು ಅಭಿವೃದ್ಧಿ ಕೆಲಸಗಳನ್ನು ಪ್ರಾಮಾಣಿಕ ದಕ್ಷತೆಯಿಂದ ಅಭಿವೃದ್ಧಿ  ಕೆಲಸ ಎಂದರು ಇದೇ ಸಂದರ್ಭದಲ್ಲಿ ಶಾಸಕ ಕೆ ಮಹದೇವ್ ಮಾತನಾಡಿ ನಮ್ಮ ಪಕ್ಷದ ಒಳ ಒಪ್ಪಂದದಂತೆ ಹಿಂದೆ ಮಂಜುನಾಥ್ ಸಿಂಗ  ರಾಜಿನಾಮೆ ನೀಡಿದ್ದರಿಂದ ಈ ಆಯ್ಕೆಯಾದರು ತೆರವಾಗಿತ್ತು ಆದ್ದರಿಂದ ಇಂದು ಅವರನ್ನು ಆಯ್ಕೆಮಾಡಲಾಗಿದೆ ಅವರಿಗೆ ಎಲ್ಲರ ಸಹಕಾರ ಅತ್ಯಗತ್ಯ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಉಪಾಧ್ಯಕ್ಷೆ ನಾಗರತ್ನ, ಸದಸ್ಯರಾದ ಪಿಎಂ.ವಿನೋದ್ ಶ್ವೇತ ನಿರಂಜನ್, ಪಿ.ಸಿ .ಕೃಷ್ಣ, ಆಶಾ, ಪುಷ್ಪಲತಾ, ಭಾರತಿ, ಸವರ್ಣ, ರತ್ನಮ್ಮ ಮಹದೇವ್ ಸೇರಿದಂತೆ ಮತ್ತಿತರರು ಹಾಜರಿದ್ದರು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next