Advertisement

ಆಂಜನೇಯನ ಬೆನ್ನೇರಿದ ಜ್ಯೋತಿರಾಜ್‌

06:45 AM May 20, 2018 | Team Udayavani |

ಕುಂದಾಪುರ: ಜನ ನೋಡ ನೋಡುತ್ತಿದ್ದಂತೆ ಬಿರು ಬಿಸಿಲಿಗೆ 82 ಅಡಿ ಎತ್ತರದ ಆಂಜನೇಯನ ವಿಗ್ರಹ ಏರಿದ ಜ್ಯೋತಿರಾಜ್‌ ಯಾನೆ ಕೋತಿರಾಜ್‌!

Advertisement

ಇಲ್ಲಿನ ಹಂಗಳೂರಿನ ಶ್ರೀ ಪ್ರಸನ್ನಾಂಜನೇಯ ಸ್ವಾಮಿ ಸನ್ನಿಧಿಯಲ್ಲಿ ಮೇ 19ರಂದು ವಾರ್ಷಿಕೋತ್ಸವ ಇತ್ತು. ಈ ಸಂದರ್ಭ ಆಗಮಿಸಿದ ಚಿತ್ರದುರ್ಗದ ಜ್ಯೋತಿರಾಜ್‌ ಅವರು ಸರಸರನೆ ಎತ್ತರದ ಹನುಮಂತನ ವಿಗ್ರಹವನ್ನು ಏರಿ ಅಲ್ಲಿ ಭಗವಾಧ್ವಜವನ್ನು ನೆಲೆ ನಿಲ್ಲಿಸಿದರು. 

ಇಂಡಿಯನ್‌ ಟಾರ್ಜನ್‌ ಎಂದೇ ಕರೆಸಿಕೊಳ್ಳುವ  ಜ್ಯೋತಿರಾಜ್‌ ಅವರು ಚಿತ್ರದುರ್ಗದ ಕೋಟೆಯನ್ನು ಬರಿಗೈಯಲ್ಲಿ ಏರುವುದರಲ್ಲಿ ಪ್ರಸಿದ್ಧರು. ಅಂತೆಯೇ ಬೃಹತ್‌ ಕಟ್ಟಡಗಳನ್ನು, ಗೋಡೆಯನ್ನು ಏರುತ್ತಿದ್ದರು.  ಇವರ ಸಾಹಸ ಆಧರಿಸಿ ವರ್ಷ ಹಿಂದೆ ಸಿನೇಮಾವೂ ಬಿಡುಗಡೆಯಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next