Advertisement

ತೆಲಂಗಾಣ ಎನ್ ಕೌಂಟರ್, ಗಲ್ಲುಶಿಕ್ಷೆ ಪರ-ವಿರೋಧ ಚರ್ಚೆ; ಸಿಜೆಐ ಬೋಬ್ಡೆ ಮಾತಿನ ಮರ್ಮವೇನು?

10:15 AM Dec 08, 2019 | Nagendra Trasi |

ನವದೆಹಲಿ/ಜೋಧ್ ಪುರ್: ತಕ್ಷಣವೇ ನ್ಯಾಯದಾನ ಮಾಡಲು ಸಾಧ್ಯವಿಲ್ಲ. ಹೀಗೆ ಮಾಡಿದರೆ ನ್ಯಾಯದ ಚಾರಿತ್ರ್ಯ ನಷ್ಟವಾದಂತೆ. ನ್ಯಾಯದ ಹೆಸರಿನಲ್ಲಿ ಪ್ರತೀಕಾರದ ನಡೆ ಸರಿಯಲ್ಲ…ಇದು ಹೈದರಾಬಾದ್ ಎನ್ ಕೌಂಟರ್ ಘಟನೆ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಶಾರದ್ ಅರವಿಂದ್ ಬೋಬ್ಡೆ ಅವರು ಶನಿವಾರ ನೀಡಿರುವ ಪ್ರತಿಕ್ರಿಯೆಯಾಗಿದೆ.

Advertisement

ದಿಶಾ ಅತ್ಯಾಚಾರ, ಕೊಲೆ ಪ್ರಕರಣದ ನಾಲ್ವರು ಆರೋಪಿಗಳನ್ನು ತೆಲಂಗಾಣ ಪೊಲೀಸರು ಎನ್ ಕೌಂಟರ್ ನಲ್ಲಿ ಹತ್ಯೆಗೈದ ಘಟನೆ ನಂತರ ಸಿಜೆಐ ಬೋಬ್ಡೆ ಈ ಅಭಿಪ್ರಾಯವ್ಯಕ್ತಪಡಿಸಿದ್ದಾರೆ. ಆದರೆ ಸಿಜೆಐ ಅವರು ನಿಖರವಾಗಿ ಇದೇ ಘಟನೆಯನ್ನು ಉಲ್ಲೇಖಿಸಿ ಈ ಹೇಳಿಕೆಯನ್ನು ನೀಡಿಲ್ಲ ಎಂದು ವರದಿ ವಿವರಿಸಿದೆ.

ಅತ್ಯಾಚಾರಿ ಆರೋಪಿಗಳನ್ನು ಎನ್ ಕೌಂಟರ್ ನಲ್ಲಿ ಹತ್ಯೆಗೈದಿದ್ದಕ್ಕೆ ಪೊಲೀಸರ ಕ್ರಮದ ಬಗ್ಗೆ ಟೀಕೆಗಳು ವ್ಯಕ್ತವಾಗಿದ್ದವು. ಆದರೆ ದೇಶದ ಬಹುತೇಕರು ಈ ಘಟನೆಯನ್ನು ಸ್ವಾಗತಿಸಿದ್ದರು.

ಸಿಜೆಐ ಬೋಬ್ಡೆ ಮಾತಿನ ಹಿನ್ನಲೆ ಏನು?

ಶನಿವಾರ ರಾಜಸ್ಥಾನದ ನೂತನ ಹೈಕೋರ್ಟ್ ಕಟ್ಟಡವನ್ನು ಉದ್ಘಾಟಿಸಿದ ನಂತರದ ಸಮಾರಂಭದಲ್ಲಿ ಸಿಜೆಐ ಬೋಬ್ಡೆ ಅವರು ದೇಶಾದ್ಯಂತ ನ್ಯಾಯಾಂಗ ಸುಧಾರಣೆ, ಮರಣದಂಡನೆ ಹಾಗೂ ಶೀಘ್ರ ನ್ಯಾಯದ ಬಗ್ಗೆ ಚರ್ಚೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಸಂದರ್ಭದಲ್ಲಿ ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಕೂಡಾ ಸಮಾರಂಭದಲ್ಲಿ ಉಪಸ್ಥಿತರಿದ್ದರು.

Advertisement

ನ್ಯಾಯಾಂಗ ಮತ್ತು ದಾವೆ ಕುರಿತ ಬದಲಾವಣೆಯ ಗ್ರಹಿಕೆ ಬಗ್ಗೆ ನಮಗೆ ಅರಿವು ಇದೆ. ಒಂದು ದಾವೆಯನ್ನು ಅಂತಿಮ ಹಂತಕ್ಕೆ ಕೊಂಡೊಯ್ಯಲು ತಗಲುವ ದೀರ್ಘಾವಧಿ ಸಮಯವೇ ದೊಡ್ಡ ಅಡ್ಡಿಯಾಗಿದೆ ಎಂದು ಸಿಜೆಐ ಈ ವೇಳೆ ಅಭಿಪ್ರಾಯವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next