Advertisement

ಉತ್ತರ ಪ್ರದೇಶದಲ್ಲಿ ಜಂಗಲ್‌ ರಾಜ್‌: ರಾಜ್ಯಪಾಲರಿಗೆ ಎಸ್‌ಪಿ ಅಧ್ಯಕ್ಷ ಅಖೀಲೇಶ್‌ ದೂರು

09:28 AM Jun 18, 2019 | Sathish malya |

ಲಕ್ನೋ : ‘ಉತ್ತರ ಪ್ರದೇಶದಲ್ಲೀಗ ಜಂಗಲ್‌ ರಾಜ್‌ ನೆಲೆಸಿದೆ. ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದೆ. ಆದುದರಿಂದ ಸಿಎಂ ಯೋಗಿ ಆದಿತ್ಯನಾಥ್‌ ಸರಕಾರವನ್ನು ನಿದ್ದೆಯಿಂದ ಎಬ್ಬಿಸಿ’ ಎಂದು ಮಾಜಿ ಸಿಎಂ, ಎಸ್‌ಪಿ ಅಧ್ಯಕ್ಷ ಅಖೀಲೇಶ್‌ ಯಾದವ್‌ ಅವರಿಂದು ರಾಜ್ಯಪಾಲ ರಾಮ ನಾಯಕ್‌ ಅವರನ್ನು ಭೇಟಿಯಾಗಿ ಆಗ್ರಹಿಸಿದ್ದಾರೆ.

Advertisement

‘ರಾಜ್ಯದಲ್ಲಿ ಹಿಂದೆ  ಎಸ್‌ ಪಿ ಸರಕಾರದ ವಿರುದ್ಧ ಯೋಗಿ ಆದಿತ್ಯನಾಥ್‌ ಅವರು ಮಾಡುತ್ತಿದ್ದ ಹಾಗೆ ರಾಜ್ಯಪಾಲರು ಈಗ ಯೋಗಿ ಸರಕಾರವನ್ನು ನಿದ್ದೆಯಿಂದ ಎಬ್ಬಿಸಬೇಕು ಎಂದು ಅಖೀಲೇಶ್‌ ರಾಜ್ಯಪಾಲರನ್ನು ಒತ್ತಾಯಿಸಿದ್ದಾರೆ.

ಅಖೀಲೇಶ್‌ ಅವರು ಪಕ್ಷದ ಹಿರಿಯ ನಾಯಕ ಅಹ್ಮದ್‌ ಹಸನ್‌ ಅವರೊಡಗೂಡಿ ರಾಜ್ಯಪಾಲರನ್ನು ಭೇಟಿಯಾಗಿ ಮನವಿ ಅರ್ಪಿಸಿ, ರಾಜ್ಯದಲ್ಲಿ ಹದಗೆಟ್ಟಿರುವ ಕಾನೂನು ಮತ್ತು ಸುವ್ಯವಸ್ಥೆಯನ್ನು ಪುನರ್‌ ಸ್ಥಾಪಿಸಲು ಮಧ್ಯ ಪ್ರವೇಶಿಸಬೇಕು ಎಂದು ಒತ್ತಾಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next