Advertisement

ನ್ಯಾಯವಾದಿ ಸಂಜೀವ ಪುನಳೇಕರ ಬಂಧನಕ್ಕೆ ಖಂಡನೆ

11:23 PM May 30, 2019 | Sriram |

ಮಹಾನಗರ: ಹಿಂದೂಗಳ ಪರವಾಗಿ ನಿರಂತರ ಹೋರಾಟ ನಡೆಸು ತ್ತಿರುವ, ಸನಾತನ ಸಂಸ್ಥೆಯ ಪರ ನ್ಯಾಯವಾದಿ ಸಂಜೀವ ಪುನಳೇಕರ ಅವರನ್ನು ಸಿಬಿಐ ಸಂಸ್ಥೆಯನ್ನು ದುರ್ಬಳಕೆ ಮಾಡಿಕೊಂಡು ಬಂಧಿಸಿರುವ ಮಹಾರಾಷ್ಟ್ರ ಸರಕಾರದ ಕ್ರಮ ಖಂಡನೀಯ ಎಂದು ಶ್ರೀರಾಮಸೇನೆ ಹೇಳಿದೆ.

Advertisement

ಬಂಧನವನ್ನು ಖಂಡಿಸಿ ಶ್ರೀ ರಾಮ ಸೇನಾ ರಾಜ್ಯ ಪ್ರಧಾನ ಕಾರ್ಯದರ್ಶಿ ಆನಂದ್‌ ಶೆಟ್ಟಿ ಅಡ್ಯಾರ್‌ ನೇತೃತ್ವದಲ್ಲಿ ಮಹಾರಾಷ್ಟ್ರ ಸರಕಾರಕ್ಕೆ ದ.ಕ. ಜಿಲ್ಲಾಧಿಕಾರಿಯವರ ಮೂಲಕ ಮನವಿ ಸಲ್ಲಿಸಲಾಯಿತು. ಶ್ರೀ ರಾಮಸೇನಾ ವಿಭಾಗ ಪ್ರಧಾನ ಕಾರ್ಯದರ್ಶಿ ಹರೀಶ್‌ ಅಮಾrಡಿ, ಜಿಲ್ಲಾ ಅಧ್ಯಕ್ಷ ಪ್ರದೀಪ್‌ ಮೂಡುಶೆಡ್ಡೆ, ಅರುಣ್‌ ಕದ್ರಿ, ಹರೀಶ್‌ ಬೊಕ್ಕಪಟ್ಣ. ಕಿಶೋರ್‌ ನೀರುಮಾರ್ಗ, ವೆಂಕಟೇಶ ಪಡಿಯಾರ್‌, ಪುರಂದರ್‌ ಕದ್ರಿ, ಶಿವಾನಂದ್‌ ನೀರುಮಾರ್ಗ, ರವಿರಾಜ್‌ ಮೂಡುಶೆಡ್ಡೆ, ಗಣೇಶ ಮೂಡುಶೆಡ್ಡೆ ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next