Advertisement

ತನಿಖೆ ಹಿಂದೆ ರಾಹುಲ್‌ ಪ್ರಭಾವ

09:35 AM Apr 20, 2018 | Karthik A |

ಹೊಸದಿಲ್ಲಿ: ನ್ಯಾ| ಲೋಯಾ ಅವರ ಸಾವಿನ ಬಗ್ಗೆ ಸಲ್ಲಿಸಲಾಗಿದ್ದ ಅರ್ಜಿ ಹಿಂದೆ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರ ‘ಕಾಣದ ಕೈ’ ಇದೆ ಎಂದು ಬಿಜೆಪಿ ಆರೋಪಿಸಿದೆ. ನ್ಯಾ| ಲೋಯಾ ಸಾವಿನ ಬಗ್ಗೆ ಸುಪ್ರೀಂಕೋರ್ಟ್‌ ತೀರ್ಪು ಹೊರಬೀಳುತ್ತಿದ್ದಂತೆ ಪತ್ರಿಕಾಗೋಷ್ಠಿ ನಡೆಸಿದ ಕೇಂದ್ರ ಕಾನೂನು ಸಚಿವ ರವಿಶಂಕರ್‌ ಪ್ರಸಾದ್‌, ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿರುವ ರಾಹುಲ್‌ ಗಾಂಧಿ ಕೂಡಲೇ ಕ್ಷಮೆ ಕೇಳಬೇಕು. ಕೇಸಿನ ಅರ್ಜಿದಾರರೆಲ್ಲರೂ ಪ್ರಮುಖ ಪ್ರತಿಪಕ್ಷದ ಜತೆ ನಂಟು ಹೊಂದಿದ್ದಲ್ಲದೆ, ಮುಂದಾಳತ್ವವನ್ನೂ ಹೊಂದಿದ್ದರು ಎಂದು  ತೀರ್ಪು ಹೇಳಿದೆ. ‘ಸುಳ್ಳು ಸುದ್ದಿ’ ಮುಂದಿಟ್ಟು ಕಾಂಗ್ರೆಸ್‌ ರಾಜಕೀಯ ಮಾಡುತ್ತಿದ್ದು, ಫೇಕ್‌ ನ್ಯೂಸ್‌ ವಿಚಾರದಲ್ಲಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

Advertisement

ಕಾಂಗ್ರೆಸ್‌ ತಿರುಗೇಟು: ತೀರ್ಪಿನ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್‌, ಭಾರತದ ಇತಿಹಾಸದಲ್ಲೇ ಇದೊಂದು ನಿರಾಸೆಯ ದಿನ ಎಂದಿರುವುದಲ್ಲದೆ, ನ್ಯಾ| ಲೋಯಾ ಅರ್ಜಿ ಹಿಂದೆ ರಾಹುಲ್‌ ಅವರ ಕಾಣದ ಕೈ ಇದೆ ಎಂಬ ಬಿಜೆಪಿ ಆರೋಪಕ್ಕೂ ಅವರು ತಿರುಗೇಟು ನೀಡಿದ್ದು, ಬಿಜೆಪಿಯ ಆತಂಕ ಕಾಣಿಸುತ್ತಿದೆ ಎಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next