Advertisement

ಜು. 19ಕ್ಕೆ ಬೆಂಗಳೂರಿನಲ್ಲಿಯೇ ಸಚಿವರಿಗೆ ರಾಹುಲ್‌ ನೀತಿ ಪಾಠ

09:36 PM Jul 13, 2023 | Team Udayavani |

ಬೆಂಗಳೂರು: ಕಳೆದ ತಿಂಗಳು ದಿಲ್ಲಿಯಲ್ಲಿ ನಿಗದಿಯಾಗಿದ್ದ ರಾಜ್ಯದ ಸಚಿವರಿಗೆ ರಾಹುಲ್‌ಗಾಂಧಿ ಅವರ ನೀತಿ ಪಾಠ ಕೊನೆಗೂ ಬೆಂಗಳೂರಿನಲ್ಲಿ ಇದೇ ತಿಂಗಳ 19ರಂದು ಬೆಳಗ್ಗೆ ನಿಗದಿಯಾಗಿದೆ.

Advertisement

ನಗರದ ಪಂಚತಾರಾ ಹೋಟೆಲೊಂದರಲ್ಲಿ ಬೆಳಗ್ಗೆ ಉಪಾಹಾರ ಕೂಟದೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರ ಸಮ್ಮುಖದಲ್ಲೇ ಎಲ್ಲ ಸಚಿವರಿಗೂ ರಾಹುಲ್‌ ಗಾಂಧಿ ನೀತಿ ಪಾಠ ಮಾಡಲಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೂಡ ಸಚಿವರಿಗೆ ಕೆಲವು ಸಲಹೆ ಸೂಚನೆಗಳನ್ನು ನೀಡಲಿದ್ದಾರೆ.

ಕಳೆದ ತಿಂಗಳ ಅಂತ್ಯದಲ್ಲೇ ದಿಲ್ಲಿಯಲ್ಲಿ ಸಭೆ ನಿಗದಿಯಾಗಿತ್ತು. ಅದರೆ ರಾಹುಲ್‌ ಗಾಂಧಿ ಅಮೆರಿಕ ಪ್ರವಾಸದಿಂದ ಆಗಮಿಸುವುದು ವಿಳಂಬವಾಗಿದ್ದರಿಂದ ಸಭೆಯನ್ನು ಮುಂದೂಡಲಾಗಿತ್ತು. ಈಗ ಬಿಜೆಪಿ ವಿರುದ್ಧದ ಮೈತ್ರಿಕೂಟದ ಸಭೆಯು ಬೆಂಗಳೂರಿನಲ್ಲಿ ಇದೇ 17ಮತ್ತು 18ರಂದು ನಡೆಯಲಿದ್ದು ಆ ಸಭೆಗೆ ಭಾಗವಹಿಸಲು ರಾಹುಲ್‌ ಗಾಂಧಿ ಆಗಮಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next