Advertisement

ಲವ್‌ಜಿಹಾದ್‌ ವಿರುದ್ಧ ಹೋರಾಟ ಅಗತ್ಯ : ಲಕ್ಷ್ಮೀನರಸಿಂಹ ಶಾಸ್ತ್ರಿ

11:25 AM Oct 29, 2020 | sudhir |

ಅರಸೀಕೆರೆ: ರಾಷ್ಟ್ರೀಯ ಸ್ವಯಂ ಸೇವಕ ಸಂಘ ಆರಂಭಗೊಂಡು 95 ವರ್ಷ ಪೂರೈಸಿದ್ದು, ಈ ಸುದೀರ್ಘ‌ ಅವಧಿಯಲ್ಲಿ ಸಂಘದ ಶಕ್ತಿಯು ಆಲದ ಮರದಂತೆ ವಿಶ್ವ ವ್ಯಾಪಿ ಹರಡಿದೆ ಎಂದು ಸಂಘದ ಪ್ರಾಂತ ಕಾರ್ಯಕಾರಿಣಿ ಸದಸ್ಯ ಲಕ್ಷ್ಮೀನರಸಿಂಹ ಶಾಸ್ತ್ರಿ ತಿಳಿಸಿದರು.

Advertisement

ನಗರದ ಸಾರ್ವಜನಿಕ ಗ್ರಂಥಾಲಯ ರಸ್ತೆಯಲ್ಲಿರುವ ಸೀತಾರಾಮ ಮಂದಿರದಲ್ಲಿ ವಿಜಯ ದಶಮಿ ಪ್ರಯುಕ್ತ ಸಂಘ ಏರ್ಪಡಿಸಿದ್ದ ಹಿರಿಯರ ಮಿಲನ ಕಾರ್ಯಕ್ರಮದಲ್ಲಿ ಮಾತನಾಡಿ, ರಾಷ್ಟ್ರದ ಸರ್ವಾಂಗೀಣ ಪ್ರಗತಿ ದೃಷ್ಟಿಯಿಂದ 1925ರ ವಿಜಯದಶಮಿ ದಿನದಂದು ಡಾ.ಕೇಶವ ಬಲರಾಂ ಹೆಡಗೆವಾರ್‌ ಅವರು, ತಮ್ಮ ಜೀವನವನ್ನು ಸಮಾಜಕ್ಕೆ ಅರ್ಪಣೆ ಮಾಡಿಕೊಳ್ಳುವ ಮೂಲಕ ರಾಷ್ಟ್ರದ ಹಿತಕ್ಕಾಗಿ ತರುಣರನ್ನು ಸಂಘಟಿಸಿ, ಅವರಲ್ಲಿ ದೇಶಭಕ್ತಿ, ಸಂಸ್ಕಾರ, ತರಬೇತಿ ನೀಡುವ ಮೂಲಕ ಸಂಘ ಪ್ರಾರಂಭಿಸಿದರು ಎಂದು ವಿವರಿಸಿದರು. ದೇಶದ ಸಮಗ್ರ ಅಭಿವೃದ್ಧಿಗೆ ಮಾರಕವಾಗಿರುವ ಮತಾಂತರ, ಲವ್‌ ಜಿಹಾದ್‌, ಗೋಹತ್ಯೆ ಪ್ರಕರಣ ನಡೆಯುತ್ತಲೇ ಇದ್ದು, ಈ ಪಿಡುಗನ್ನು ಬುಡ ಸಮೇತ ಕಿತ್ತು ಹಾಕಲು ಸಮಗ್ರ ಹಿಂದೂ ಸಮಾಜ ಸನ್ನಧವಾಗಿ ಹೋರಾಡಬೇಕಾಗಿದೆ ಎಂದು ಅವರು ತಿಳಿಸಿದರು. ನಮ್ಮ ಸಂಘವು ಯಾವ ಧರ್ಮ, ಜನಾಂಗವನ್ನು ದ್ವೇಷಿಸುವುದಿಲ್ಲ,
ಸಹಿಷ್ಣುತೆ ಮೈಗೂಡಿಸಿಕೊಂಡು ಬೆಳೆಯುತ್ತಿದೆ.

ಇದನ್ನೂ ಓದಿ :ವ್ಯಕ್ತಿಯೊಬ್ಬನನ್ನು ಕೊಲೆಗೈದು ಕಾರು ಸಮೇತ ಸುಟ್ಟು ಹಾಕಿದ ದುಷ್ಕರ್ಮಿಗಳು

ದೇಶದಲ್ಲಿ 58 ಸಾವಿರ ಶಾಖೆಗಳನ್ನು ಹೊಂದಿದ್ದು, ಆಲದ ಮರದಂತೆ ವಿಶ್ವ ವ್ಯಾಪಿ 2 ಲಕ್ಷ ಸೇವಾ ಚಟುವಟಿಕೆ ನಡೆಯುತ್ತಿರುವುದು ಹೆಮ್ಮೆಯ ಸಂಗತಿ ಎಂದರು. ಪ್ರಿಯದರ್ಶಿನಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಅನಂತರಾಮಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಂಘಟನೆ ಮುಖ್ಯಸ್ಥ ಕೆ.ಎನ್‌. ಸತ್ಯನಾರಾಯಣ, ಮುಖ್ಯ ಶಿಕ್ಷಕ ಮಹಾಲಿಂಗಪ್ಪ,
ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಎನ್‌.ಡಿ ಪ್ರಸಾದ್‌, ವೆಂಕಟೇಶ್‌, ನಿವೃತ್ತ ಬ್ಯಾಂಕ್‌ ಅಧಿಕಾರಿ ಶ್ರೀಕಾಂತ್‌, ಗೋವಿಂದೇಗೌಡ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next