Advertisement

ಪುತ್ರಿಯರ ಕಣ್ಣೆದುರಲ್ಲೇ ಗುಂಡಿನ ದಾಳಿಗೆ ಒಳಗಾಗಿದ್ದ ಪತ್ರಕರ್ತ ವಿಕ್ರಮ್ ಜೋಶಿ ಸಾವು

08:49 AM Jul 22, 2020 | Mithun PG |

ಗಾಜಿಯಾಬಾದ್: ಕಳೆದ ಸೋಮವಾರ ದೆಹಲಿ ಸಮೀಪದ ಗಾಜಿಯಾಬಾದ್ ನಲ್ಲಿ ದುಷ್ಕರ್ಮಿಗಳ ಗುಂಡಿನ ದಾಳಿಗೆ ಒಳಗಾಗಿದ್ದ ಉತ್ತರಪ್ರದೇಶದ ಪತ್ರಕರ್ತ ಚಿಕಿತ್ಸೆ ಫಲಿಸದೇ ಇಂದು ಮುಂಜಾನೆ ಸಾವನ್ನಪ್ಪಿದ್ದಾರೆ.

Advertisement

ಪತ್ರಕರ್ತ ವಿಕ್ರಮ್ ಜೋಶಿ ಅವರು ಕಳೆದ ಸೋಮವಾರ ರಾತ್ರಿ 10:30ರ ವೇಳೆಗೆ  ತನ್ನಿಬ್ಬರು ಹೆಣ್ಣುಮಕ್ಕಳ  ಜೊತೆ ಬೈಕ್ ನಲ್ಲಿ ಮನೆಗೆ ತೆರಳುತ್ತಿದ್ದರು. ಈ ವೇಳೆ ಅವರನ್ನು ಹಿಂಬಾಲಿಸಿಕೊಂಡು ಬಂದ ದುಷ್ಕರ್ಮಿಗಳ ಗುಂಪೊಂದು ವಿಕ್ರಮ್ ಜೋಶಿ ನಿವಾಸದ ಎದುರಲ್ಲೇ ಪುತ್ರಿಯರ ಕಣ್ಮುಂದೆ  ಗುಂಡಿಕ್ಕಿದ್ದರು.

ರಕ್ತದ ಮಡುವಿನಲ್ಲಿ ಬಿದ್ದಿದ್ದ ಅವರನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಗಿ ಚಿಕಿತ್ಸೆ ನೀಡಲಾಗಿತ್ತು. ಆದರೇ ಗಂಭೀರವಾಗಿ ಗಾಯಗೊಂಡಿದ್ದರಿಂದ ಇಂದು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ. ಸಂಫೂರ್ಣ ಘಟನೆ ಸಿಸಿಟಿವಿಯಲ್ಲಿ ದಾಖಲಾಗಿದ್ದು, ಪ್ರಕರಣದಲ್ಲಿ 9 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಮಾತ್ರವಲ್ಲದೆ 2 ಪೊಲೀಸರು ಕೂಡ ಸಸ್ಪೆಂಡ್ ಆಗಿದ್ದಾರೆ.

ಘಟನೆ ನಡೆಯುವ 4 ದಿನಗಳ ಮೊದಲು, ತನ್ನ ಕುಟುಂಬ ಸದಸ್ಯರೊಬ್ಬರಿಗೆ ಕೆಲವು ವ್ಯಕ್ತಿಗಳು ಕಿರುಕುಳ ನೀಡುತ್ತಿದ್ಧಾರೆ ಎಂದು ವಿಕ್ರಮ್ ಜೋಶಿ ದೂರು ದಾಖಲಿಸಿದ್ದರು.  ಅದಾದ ನಂತರವೇ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ ಎಂದು ಮಾಧ್ಯಮದ ವರದಿ ತಿಳಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next