Advertisement

ಪ್ರೊ.ಭಗವಾನ್‌ ಬಂಧಿಸಲು ಸಂಸದ ಜೋಶಿ ಒತ್ತಾಯ

06:50 AM Oct 07, 2018 | Team Udayavani |

ಧಾರವಾಡ: ಪ್ರೊ. ಕೆ.ಎಸ್‌.ಭಗವಾನ್‌ ಮೇಲೆ ಪೊಲೀಸರು ಸ್ವಯಂ ಪ್ರೇರಣೆಯಿಂದ ದೂರು ದಾಖಲಿಸಿಕೊಂಡು ಬಂಧಿಸಬೇಕು ಎಂದು ಸಂಸದ ಪ್ರಹ್ಲಾದ ಜೋಶಿ ಒತ್ತಾಯಿಸಿದರು. 

Advertisement

ಸುದ್ದಿಗಾರರೊಂದಿಗೆ ಮಾತನಾಡಿ, ಮೈಸೂರು ದಸರಾ ಬಗ್ಗೆ ಭಗವಾನ್‌ ಅವರು ನೀಡಿದ ಹೇಳಿಕೆಯನ್ನು ಖಂಡಿಸಿದರು. ಭಗವಾನ್‌ ಮತ್ತು ಪ್ರಕಾಶ ರೈ ಅವರು ಹುಚ್ಚರಂತೆ ಮಾತನಾಡುತ್ತಿದ್ದು, ಅವರಿಗೆ ಸಾಮಾಜಿಕ ಕಾಳಜಿ ಇಲ್ಲ. ಅವರಿಬ್ಬರೂ ಪ್ರಚಾರಕ್ಕಾಗಿ ಈ ರೀತಿಯ ಹೇಳಿಕೆ ನೀಡುತ್ತಿದ್ದಾರೆ. ಒಂದು ವೇಳೆ ಅವರಿಗೆ ಧೈರ್ಯವಿದ್ದರೆ ಅನ್ಯ ಧರ್ಮದ ಬಗ್ಗೆ ಮಾತನಾಡಲಿ ನೋಡೋಣ ಎಂದು ಸವಾಲು ಎಸೆದರು. ರಾಹುಲ್‌ಗಾಂ ಧಿ ಅವರಿಗೆ ಸೋಲು ಆರಂಭವಾದ ಬಳಿಕ ದೇವಸ್ಥಾನ ಸುತ್ತಾಡುತ್ತಿದ್ದು, ಅವರು ರಾಮಮಂದಿರ ಬಗ್ಗೆ ತಮ್ಮ ನಿಲುವು ತಿಳಿಸಲಿ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next