ಹುಬ್ಬಳ್ಳಿ: ವಿವಿಧ ಸಂಘ-ಸಂಸ್ಥೆ ಪದಾಧಿಕಾರಿಗಳು ಮಯೂರಿ ಎಸ್ಟೇಟ್ನಲ್ಲಿರುವ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ ಜೋಶಿ ಅವರ ನಿವಾಸಕ್ಕೆ ತೆರಳಿ ಚುನಾವಣೆಯಲ್ಲಿ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದರು. ಉತ್ತರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ, ಗ್ರಾಮೀಣ ವೈದ್ಯರ ಸಂಘ, ನವನಗರ ಗೋಂದಳಿ ಸಮಾಜ ಸಂಘ ಸೇರಿದಂತೆ ವಿವಿಧ ಸಂಘ-ಸಂಸ್ಥೆ ಪದಾಧಿಕಾರಿಗಳು ಬಿಜೆಪಿ ಅಭ್ಯರ್ಥಿಗೆ ಬೆಂಬಲ ನೀಡುವುದಾಗಿ ಭರವಸೆ ನೀಡಿದರು.
ಉಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಶಂಕರ ಸುಗತೆ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ದೇಶದ ಶ್ರೇಯಸ್ಸಿಗಾಗಿ ದುಡಿಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಸಂಪೂರ್ಣ ಬೆಂಬಲ ನೀಡುವುದಾಗಿ ಹೇಳಿದರು.
ಗ್ರಾಮೀಣ ಭಾಗದ ವೈದ್ಯರ ಸಂಘದ ಅಧ್ಯಕ್ಷ ಡಾ| ಮಹೇಶ ಕಾಡವಾಡ ಮಾತನಾಡಿ, ಸಂಸದರು ಗ್ರಾಮೀಣ ಭಾಗದ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಇಂತಹ ಕೆಲಸಗಾರರನ್ನು ಕಳೆದುಕೊಳ್ಳುವುದು ಕ್ಷೇತ್ರದ ಜನತೆಗೆ ಇಷ್ಟವಿಲ್ಲ. ಹೀಗಾಗಿ
ಅವರಿಗೆ ಸಂಪೂರ್ಣ ಬೆಂಬಲ ನೀಡಲಾಗುವುದು ಎಂದರು.
ಅಜ್ಜಪ್ಪ ಹೊರಕೇರಿ, ಮಂಜುನಾಥ ಹಗೆದಾರ, ಓಂ ಕಿರಣ, ಸೂರಜ್ ಪ್ರಸನ್ನ ಸಿಂಹ, ಡಾ| ರಾಜು ಧಾಣಿ ಡಾ| ಮಡಿವಾಳರ್ ಗುರುನಾಥ, ಡಾ|ಕಿರಣ ಬೆಲ್ಲದ, ಡಾ| ಕುಂಬಾರ, ಎಂ.ಆರ್. ಸುರೇಶ ಕುಂಬಾರ ಇನ್ನಿತರರಿದ್ದರು.