Advertisement

“ಪದ್ಮಾವತಿ’ಬಗ್ಗೆ ಜೋಶಿ ಕಿಡಿ

06:20 AM Nov 19, 2017 | Team Udayavani |

ಮುಂಬಯಿ: “ಪದ್ಮಾವತಿ’ ಸಿನೆಮಾ ವಿವಾದ ಸದ್ಯಕ್ಕಂತೂ ತಣ್ಣಗಾಗು ವಂತೆ ಕಾಣುತ್ತಿಲ್ಲ. ಪ್ರಮಾಣಪತ್ರಕ್ಕೆಂದು ಬಂದಿದ್ದ ಸಿನೆಮಾ ವನ್ನು ತಾಂತ್ರಿಕ ಸಮಸ್ಯೆಗಳ ಹಿನ್ನೆಲೆಯಲ್ಲಿ ವಾಪಸ್‌ ಕಳುಹಿಸಿದ ಬೆನ್ನಲ್ಲೇ ಸಿಬಿಎಫ್ಸಿ ಮುಖ್ಯಸ್ಥ ಪ್ರಸೂನ್‌ ಜೋಶಿ ಅವರು ಚಿತ್ರತಂಡವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಪ್ರಮಾಣ ಪತ್ರವನ್ನು ವಿತರಿಸುವ ಮೊದಲೇ ಚಿತ್ರದ ಸ್ಕ್ರೀನಿಂಗ್‌ ಮಾಡುತ್ತಿರುವುದೇಕೆ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.

Advertisement

ಸೆನ್ಸಾರ್‌ ಸರ್ಟಿಫಿಕೇಟ್‌ ಸಿಗುವ ಮುನ್ನವೇ ಪದ್ಮಾವತಿ ನಿರ್ಮಾಪಕರು ಚಿತ್ರ ವನ್ನು ಮಾಧ್ಯಮಗಳ ಮುಂದೆ ಸ್ಕ್ರೀನಿಂಗ್‌ ಮಾಡಿದ್ದಾರೆ. ಅಲ್ಲದೆ, ಚಿತ್ರಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವ ಕರ್ಣಿ ಸೇನಾ ಸದಸ್ಯ ರಿಗೂ ಚಿತ್ರವನ್ನು ಪ್ರದರ್ಶಿ ಸಲು ಸಿದ್ಧತೆ ನಡೆಸಿದ್ದಾರೆ. ಈ ಎಲ್ಲ ಬೆಳವಣಿಗೆಗಳಿಂದ ಸಿಬಿಎಫ್ಸಿ ಮುಖ್ಯಸ್ಥ ಜೋಶಿ ಕೆಂಡವಾಗಿ ದ್ದಾರೆ. “ಸಿಬಿಎಫ್ಸಿ ಪ್ರಮಾಣಪತ್ರ ನೀಡುವ ಮೊದಲೇ ಮಾಧ್ಯಮಗಳಿಗೆ ಚಿತ್ರವನ್ನು ಪ್ರದರ್ಶಿಸ ಲಾಗಿದೆ. ಕೆಲವು ರಾಷ್ಟ್ರೀಯ ಚಾನೆಲ್‌ಗ‌ಳಲ್ಲಿ ಸಿನೆಮಾ ವಿಮರ್ಶೆಯೂ ಪ್ರಕಟ ವಾಗಿದೆ. ಇದು ಅತ್ಯಂತ ನಿರಾಶಾ ದಾಯಕ ವಿಚಾರ. ಸಿನೆಮಾ ಬಿಡುಗಡೆಗೆ ನಿರ್ದಿಷ್ಟ ವ್ಯವಸ್ಥೆಯೊಂದಿರುವಾಗ, ಅದರೊಂದಿಗೆ ರಾಜಿ ಮಾಡಿಕೊಳ್ಳುವುದು ಎಷ್ಟು ಸರಿ’ ಎಂದು ಪ್ರಶ್ನಿಸಿದ್ದಾರೆ.

ಮತ್ತೂಂದು ಕೋಟೆ ಪ್ರವೇಶಕ್ಕೂ ತಡೆ ಈ ನಡುವೆ, ಶುಕ್ರವಾರ ರಾಜಸ್ಥಾನದ ಜೈಪುರದ ಚಿತ್ತೋರ್‌ಗಢ ಕೋಟೆ ಪ್ರವೇಶಕ್ಕೆ ತಡೆ ನೀಡಿದ್ದ ಕರ್ಣಿ ಸೇನಾ ಸದಸ್ಯರು ಶನಿವಾರ ಇಲ್ಲಿನ ಮತ್ತೂಂದು ಕೋಟೆ ಯಾದ ಕುಂಭಳಗಢದ ಪ್ರವೇಶಕ್ಕೂ ಪ್ರವಾಸಿಗರಿಗೆ ಅವಕಾಶ ನೀಡದೇ ಪ್ರತಿಭಟಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next