Advertisement

ವೈದ್ಯನ ರೂಪದ ಗಣೇಶ ಮೂರ್ತಿ ಪ್ರತಿಷ್ಠಾಪಿಸಿದ ಜೊಲ್ಲೆ ದಂಪತಿ

03:17 PM Aug 23, 2020 | keerthan |

ಚಿಕ್ಕೋಡಿ: ಗಣೇಶ ಚತುರ್ಥಿಯ ಅಂಗವಾಗಿ ಸಚಿವೆ ಶಶಿಕಲಾ ಜೊಲ್ಲೆ ಹಾಗೂ ಸಂಸದ ಅಣ್ಣಾಸಾಹೇಬ ಜೊಲ್ಲೆ ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಮನೆಯಲ್ಲಿ ವೈದ್ಯನ ರೂಪದಲ್ಲಿರುವ ಗಣೇಶನ ಮೂರ್ತಿ ಪ್ರತಿಷ್ಠಾಪನೆ ಮಾಡಿ ವಿಶೇಷ ಪೂಜೆ ಸಲ್ಲಿಸಿದರು.

Advertisement

ಕೊವಿಡ್-19 ನ ಹಾವಳಿಯು ಇಡೀ ಮಾನವ ಜನಾಂಗವನ್ನೇ ತಲ್ಲಣಗೊಳಿಸಿದೆ. ಈ ಸಂದರ್ಭದಲ್ಲಿ ಕೋವಿಡ್-19 ವಾರಿಯರ್ಸ್ ಮಾತ್ರ ನಿಸ್ವಾರ್ಥವಾಗಿ, ತಮ್ಮ ಜೀವದ ಹಂಗನ್ನು ತೊರೆದು ಕೇವಲ ಜನಸೇವೆಯನ್ನೇ ಉಸಿರಾಗಿಸಿಕೊಂಡು, ನಮಗಾಗಿ ದುಡಿಯುತ್ತಾ, ಇಂದು ನಮ್ಮ ಪಾಲಿನ ದೇವತಾಸ್ವರೂಪಿಗಳಾಗಿದ್ದಾರೆ.

ಗಣೇಶ ಹಬ್ಬದ ಸುಸಂದರ್ಭವನ್ನು, ಈ ಧೀರರಿಗೆ ಧನ್ಯವಾದಗಳನ್ನು ಅರ್ಪಿಸಲು ಬಳಸಿದ್ದೇವೆ. ವೈದ್ಯನ ರೂಪದಲ್ಲಿರುವ ಗಣೇಶನ ಮೂರ್ತಿಯನ್ನು ಸಚಿವೆ ಹಾಗೂ ಸಂಸದರ ಮನೆಗೆ ತಂದು, ಕೋವಿಡ್-19 ವಾರಿಯರ್ ಗಳ ಚಿತ್ರಗಳೊಂದಿಗೆ ಪ್ರತಿಷ್ಟಾಪಿಸಿ, ವಿಧಿವತ್ತಾಗಿ ಪೂಜಿಸಿ, ಲೋಕದ ಸರ್ವ ವಿಘ್ನಗಳನ್ನೂ ನಿವಾರಿಸಲೇಂದು ಗಣಪತಿಯಲ್ಲಿ ಪ್ರಾರ್ಥಿಸಲಾಗಿದೆ ಎಂದು ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದರು.

ಸಂಸದ ಅಣ್ಣಾಸಾಹೇಬ ಜೊಲ್ಲೆ, ಬಸವಪ್ರಸಾದ ಜೊಲ್ಲೆ, ಜ್ಯೋತಿಪ್ರಸಾದ ಜೊಲ್ಲೆ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next