Advertisement

ಪೊಲೀಸರ ಜಂಟಿ ಕಾರ್ಯಚರಣೆ: ಕುಖ್ಯಾತ ಕಳ್ಳರ ಬಂಧನ

02:42 PM Aug 19, 2019 | Team Udayavani |

ಶಿವಮೊಗ್ಗ: ವಿವಿಧ ನೆಪಗಳನ್ನು ಹೇಳಿಕೊಂಡು ಮನೆಗಳಿಗೆ ನುಗ್ಗಿ ಕಳ್ಳತನ ಮಾಡುತ್ತಿದ್ದ ಆರು ಮಂದಿಯನ್ನು  ಶಿವಮೊಗ್ಗ ದೊಡ್ಡಪೇಟೆ ಹಾಗೂ ವಿನೋಬ ನಗರ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

Advertisement

ಘಟನೆಗೆ ಸಂಬಂಧಿಸಿದಂತೆ ಆರು ಮಂದಿಯನ್ನು ಬಂಧಿಸಿದ ಪೊಲೀಸರು ಆರೋಪಿಗಳಿಂದ 740 ಗ್ರಾಂ ಬಂಗಾರ, 4 ಕೆಜಿ ಬೆಳ್ಳಿ, 1೦ ಸಾವಿರ ನಗದು, 30 ಸಾವಿರ ಬೆಲೆಬಾಳುವ ಸ್ಪ್ಲೆಂಡರ್ ಬೈಕ್  ಸೇರಿದಂತೆ ಬಂಧಿತರಿಂದ 24 ಲಕ್ಷದ 79 ಸಾವಿರ ಮೌಲ್ಯದ ವಸ್ತುಗಳನ್ನು ಬಂಧಿತರಿಂದ ವಶಪಡಿಸಿಕೊಂಡಿದ್ದಾರೆ.

ಪ್ರಕಾಶ್, ಇಲಿಯಾಸ್, ವಿಜಿಕುಮಾರ್, ಅಬ್ದುಲ್ ರೋಷನ್, ಮಹಮ್ಮದ್ ಇಬ್ರಾಹಿಂ, ಸೈಫುಲ್ಲಾ ಖಾನ್ ಬಂಧಿತರು. ಬಂದಿತರ ಮೇಲೆ ಜಿಲ್ಲೆಯ ಇತರೆ ಠಾಣೆಗಳಲ್ಲಿ 23 ಪ್ರಕರಣಗಳು ದಾಖಲಾಗಿವೆ. ಜಂಟಿ ಕಾರ್ಯಚರಣೆಯನ್ನು ನಡೆಸಿ ಆರೋಪಿಗಳನ್ನು ಪತ್ತೆಹಚ್ಚಿದ ಪೊಲೀಸ್ ಅಧಿಕಾರಿಗಳ ತಂಡಕ್ಕೆ ಎಸ್ಪಿ ಶಾಂತರಾಜು. 10 ಸಾವಿರ ಹಣ ಬಹುಮಾನವಾಗಿ ಘೋಷಣೆ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next