Advertisement

ಕಾಸರಗೋಡು ತಳಿ ಗೋಸಂರಕ್ಷಣೆಗೆ ಕೈಜೋಡಿಸಿ: ಶ್ರೀ ಮಾಣಿಲ ಸ್ವಾಮೀಜಿ

02:02 AM Feb 25, 2020 | Team Udayavani |

ಕುಂಬಳೆ: ಕೊಂಡೆವೂರಿನ ನಿತ್ಯಾನಂದ ಯೋಗಾಶ್ರಮದಲ್ಲಿ ಗಾಯತ್ರೀ ದೇವಿಯ ಹಾಗೂ ಭಗವಾನ್‌ ನಿತ್ಯಾನಂದ ಗುರುದೇವರ ಪ್ರತಿಷ್ಠಾ ವರ್ಧಂತ್ಯುತ್ಸವ ಅಂಗವಾಗಿ ಗಣಯಾಗ, ಅಧಿವಾಸ ಹೋಮ, ಕಲಶಾಭಿಷೇಕ ಮತ್ತು ಚಂಡಿಕಾ ಹೋಮ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ಮಾಣಿಲ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಮತ್ತು ಕೊಂಡೆವೂರು ಯೋಗಾನಂದ ಸರಸ್ವತೀ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಕಟೀಲಿನ ಅನಂತಪದ್ಮನಾಭ ಆಸ್ರಣ್ಣರವರ ಆಚಾರ್ಯತ್ವದಲ್ಲಿ ಜರಗಿತು.

Advertisement

ಯತಿದ್ವಯರ, ಕಟೀಲಿನ ಹರಿನಾರಾಯಣ ದಾಸ ಆಸ್ರಣ್ಣ ಮತ್ತು ಕಮಲಾದೇವೀ ಪ್ರಸಾದ ಆಸ್ರಣ್ಣ ರವರ ಉಪಸ್ಥಿತಿಯಲ್ಲಿ ಧಾರ್ಮಿಕ ಸಭೆ ನಡೆಯಿತು. ಮಾಣಿಲ ಶ್ರಿಗಳು ತಮ್ಮ ಆಶೀರ್ವಚನದಲ್ಲಿ ರಾಷ್ಟ್ರ ಬೆಳೆಯಲು ನಮ್ಮ ಆಚರಣೆಗಳು ಉಳಿಯಬೇಕು ಎಂದರು. ಕೊಂಡೆವೂರುಶ್ರೀಗಳು ತಮ್ಮ ಆಶೀರ್ವಚನದಲ್ಲಿ ಸಮಸ್ತರ ಬೆಂಬಲದಿಂದ ಸವಾಲುಗಳನ್ನೆದುರಿಸಿ ಮಠ ಬೆಳೆಯುತ್ತಿದೆ, ಅಳಿಯುತ್ತಿರುವ ಕಾಸರಗೋಡು ತಳಿಯ ಗೋಸಂರಕ್ಷಣೆಗಾಗಿ ಸಮಸ್ತ ಸಮಾಜ ಕೈ ಜೋಡಿಸಿದರೆ ಈ ಮಹಾನ್‌ ಕಾರ್ಯದಲ್ಲಿ ಶ್ರೀಮಠ ದಿಟ್ಟ ಹೆಜ್ಜೆಯನ್ನಿಟ್ಟು ಪವಿತ್ರ ಗೋಮಾತೆ ಸೇವೆ, ಸಂರಕ್ಷಣೆಯಲ್ಲಿ ಮುನ್ನಡೆಯಲಿದೆ ಎಂದರು.

ಇದೇ ಸಂದರ್ಭದಲ್ಲಿ ದೀಪ ಪ್ರಜ್ವಾಲನೆಗೆ„ದು, ಯತಿದ್ವಯರ ನೇತƒತ್ವದಲ್ಲಿ ವೇದಿಕೆಯಲ್ಲಿ ಉಪಸ್ಥಿತರಿದ್ದ ಗಣ್ಯರು Óಪೇಜಾವರ ಶ್ರೀಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆಗೆ„ದರು. ಎಂ.ಬಿ. ಪುರಾಣಿಕ್‌ ಪೇಜಾವರ ಶ್ರೀಗಳು ಹಿಂದು ಧರ್ಮ ಸಂರಕ್ಷಣೆಗೆ ಅವತರಿಸಿದ ವಾಮನಮೂರ್ತಿ,ಅವರಂದಂತೆ ದೀನ ದಲಿತರ ಸೇವೆಯೇ ನಾವು ಭಗವಂತನಿಗೆ ಸಲ್ಲಿಸುವ ಕರ ಎಂದು ಹೇಳಿದರು.

ಆಸ್ರಣ್ಣದ್ವಯರು ಕರ್ಮಸಿದ್ಧಾಂತ,ಜ್ಞಾನ ಸಿದ್ಧಾಂತವನ್ನು ಸೇರಿಸಿ ನಡೆಯುವ ಕೊಂಡೆವೂರು ಕ್ಷೇತ್ರಕ್ಕೆ ಹೋಗಿ ಕೊಂಡೇ (ಪ್ರಸಾದ) ಹೋಗಬೇಕೆಂದು ಇಲ್ಲಿನ ವೈಶಿಷ್ಟéವನ್ನು ಕೊಂಡಾಡಿದರು. ಪ್ರಮುಖರು ಉಪಸ್ಥಿತರಿದ್ದರು.
ಸಮಾರಂಭದಲ್ಲಿ ವೈದ್ಯ, ಸಾಮಾಜಿಕ ಧಾರ್ಮಿಕ ಮುಂದಾಳು ಡಾಣ ಶ್ರೀಧರ ಭಟ್‌ ಉಪ್ಪಳ ದಂಪತಿಯನ್ನು ಯತಿದ್ವಯರು, ಆಸ್ರಣ್ಣದ್ವಯರು ಮತ್ತು ಅತಿಥಿಗಳು ಸಮ್ಮಾನಿಸಿದರು ಸಮ್ಮಾನಕ್ಕೆ ಉತ್ತರಿಸಿದ ಡಾಣ ಭಟ್‌ರವರು ಸಾಮಾಜಿಕ ಧಾರ್ಮಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದರ ಮೂಲಕ ಜೀವನ ಸಾಫಲ್ಯವನ್ನು ಅನುಭವಿಸಿದ್ದೇನೆಂದರು.

ನಂದಕಿಶೋರ್‌ ಪ್ರಾರ್ಥನೆಗೆ„ದರು.ಡಾಣ ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ ಸ್ವಾಗತಿಸಿದರು.

Advertisement

ದಿನಕರ್‌ ಹೊಸಂಗಡಿ ಸಮ್ಮಾನ ಪತ್ರ ವಾಚಿಸಿದರು. ಅಶೋಕ ಬಾಡೂರು ವಂದಿಸಿದರು. ಹರೀಶ್‌ ಮಾಡ ನಿರೂಪಿಸಿದರು. ಶ್ರೀ ಕ್ಷೇತ್ರದಲ್ಲಿ ಸೂರ್ಯಾಸ್ತದಿಂದ ಅಖಂಡ ಭಜನಾ ಸಪ್ತಾಹ ಆರಂಭಗೊಂಡು ಮಾ.1 ರಂದು ಮಂಗಲಾಚರಣೆಯಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next