Advertisement

ಜೋಗ ಜಲಪಾತದ ಎದುರು ನಾಡಗೀತೆ: ಕನ್ನಡ ಮಾಸ ಆಚರಣೆಗೆ ಮುನ್ನುಡಿ

05:15 PM Oct 28, 2021 | Team Udayavani |

ಸಾಗರ: ಕನ್ನಡ ರಾಜ್ಯೋತ್ಸವದ ಪೂರ್ವಭಾವಿಯಾಗಿ ತಾಲೂಕಿನ ಜಗತ್ಪ್ರಸಿದ್ಧ ಜೋಗ ಜಲಪಾತದ ಎದುರು ವಿದುಷಿ ವಸುಧಾ ಶರ್ಮ ಅವರ ನೇತೃತ್ವದಲ್ಲಿ ನಾಡಗೀತೆ ಹಾಡುವ ಮೂಲಕ ಗುರುವಾರ ಕನ್ನಡ ಮಾಸ ಆಚರಣೆಗೆ ಮುನ್ನುಡಿ ಬರೆಯಲಾಯಿತು.

Advertisement

ಸಾಗರ ಉಪವಿಭಾಗೀಯ ಅಧಿಕಾರಿಗಳು, ತಹಶೀಲ್ದಾರ್, ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳು, ಜೋಗ ಕಾರ್ಗಲ್ ಪಟ್ಟಣ ಪಂಚಾಯಿತಿ, ಸೊರಬ ಪಟ್ಟಣ ಪಂಚಾಯಿತಿಯ ಚುನಾಯಿತ ಜನಪ್ರತಿನಿಧಿಗಳು, ಶಾಲಾ ಮಕ್ಕಳು, ಸ್ಥಳೀಯರು, ಪರಿಸರ ಪ್ರೇಮಿಗಳು, ಪ್ರವಾಸಿಗರು, ಈ ಕನ್ನಡ ನಾಡಗೀತೆಗೆ ಧ್ವನಿಗೂಡಿಸಿ, ಕನ್ನಡ ನಾಡು – ನುಡಿ – ಭಾಷೆ – ಜಲ ರಕ್ಷಣೆ ಮಾಡುವ ಪ್ರತಿಜ್ಞಾವಿಧಿ ಮೂಲಕ ಕರುನಾಡಿಗೆ ಗೌರವ ಸಲ್ಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next