Advertisement

ಉದ್ಯೋಗ ಖಾತರಿ ಕಾರ್ಮಿಕರಿಂದ ಅಂಚೆ ಕಚೇರಿಗೆ ಜಾಥಾ

03:45 AM Jul 06, 2017 | |

ಕಾಸರಗೋಡು: ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಕೊಂಡು ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯ ಕಾರ್ಮಿಕರು ಉದ್ಯೋಗ ಖಾತರಿ ಕಾರ್ಮಿಕ ಯೂನಿಯನ್‌ ನೇತೃತ್ವದಲ್ಲಿ ಕಾಸರಗೋಡು ನಗರದ ಪ್ರಧಾನ ಅಂಚೆ ಕಚೇರಿಗೆ ಜಾಥಾ ನಡೆಸಿದರು. 

Advertisement

ಜಾಥಾವನ್ನು ಎ.ಐ.ಟಿ. ಯು.ಸಿ. ಜಿಲ್ಲಾ ಕಾರ್ಯದರ್ಶಿ ಕೆ.ವಿ. ಕೃಷ್ಣನ್‌ ಉದ್ಘಾಟಿಸಿ ಮಾತನಾಡಿದರು.ಯೋಜನೆಯ ಕಾರ್ಮಿಕರಿಗೆ ನೀಡಲು ಬಾಕಿಯಿರುವ ಮೊತ್ತವನ್ನು ಶೀಘ್ರವಾಗಿ ವಿತರಿಸಬೇಕು, ದಿನ ವೇತನವನ್ನು 600 ರೂ. ಗೇರಿಸ ಬೇಕು, ಉದ್ಯೋಗದ ದಿನವನ್ನು 200 ಕ್ಕೇರಿಸಬೇಕು, ಕೆಲಸದ ಸಮಯ ಬೆಳಗ್ಗೆ 10ರಿಂದ ಸಂಜೆ 4 ಗಂಟೆಯ ವರೆಗೆ ಸೀಮಿತಗೊಳಿಸಬೇಕು, ಇ.ಎಸ್‌.ಐ. ಮಂಜೂರು ಮಾಡಬೇಕು, ಕ್ಷೇಮನಿಧಿ ರೂಪಿಸಬೇಕು, ಅಪಘಾತ ವಿಮೆಯನ್ನು ಐದು ಲಕ್ಷ ರೂ.ಗೇರಿಸಬೇಕು ಮೊದಲಾದ ಬೇಡಿಕೆಗಳನ್ನು ಮುಂದಿಟ್ಟು ಉದ್ಯೋಗ ಖಾತರಿ ಕಾರ್ಮಿಕರು ಜಾಥಾ ನಡೆಸಿದರು.
 

Advertisement

Udayavani is now on Telegram. Click here to join our channel and stay updated with the latest news.

Next