Advertisement

ಜೆಎನ್‌ಯು ಕೇಸ್‌: ಕೋರ್ಟ್‌ ತರಾಟೆ

12:30 AM Jan 21, 2019 | Team Udayavani |

ಹೊಸದಿಲ್ಲಿ: ದೇಶದ್ರೋಹ ಆರೋಪಕ್ಕೆ ಸಂಬಂಧಿಸಿ ಜೆಎನ್‌ಯು ವಿದ್ಯಾರ್ಥಿ ಸಂಘದ ಮಾಜಿ ನಾಯಕ ಕನ್ಹಯ್ಯ ಕುಮಾರ್‌ಸೇರಿ ವಿದ್ಯಾರ್ಥಿಗಳ ವಿರುದ್ಧ ಸಲ್ಲಿಕೆಯಾಗಿರುವ ಆರೋಪ ಪಟ್ಟಿಯನ್ನು ಸ್ವೀಕರಿಸಲು ದಿಲ್ಲಿಯ ಕೋರ್ಟ್‌ ನಿರಾಕರಿಸಿದೆ. 

Advertisement

ಆರೋಪಪಟ್ಟಿ ಸಲ್ಲಿಸುವ ಮುನ್ನ ಪೊಲೀಸರು ದಿಲ್ಲಿ ಸರಕಾರ‌ದ ಅನುಮತಿ ಪಡೆಯಬೇಕಾದ್ದು ಅಗತ್ಯ. ಆದರೆ, ಪೊಲೀಸರು ಅನುಮತಿ ಪಡೆದಿರಲಿಲ್ಲ. ಈ ಹಿನ್ನೆಲೆ ಯಲ್ಲಿ ಶನಿವಾರ ಪೊಲೀಸರನ್ನು ತರಾಟೆಗೆ ತೆಗೆದುಕೊಂಡ ನ್ಯಾಯಾಲಯ, “ಅಗತ್ಯ ಅನುಮತಿ ಪಡೆಯದೇ ಹೇಗೆ ಆರೋಪಪಟ್ಟಿ ಸಲ್ಲಿಸಿದಿರಿ’ ಎಂದು ಪ್ರಶ್ನಿಸಿದೆ. ಕೊನೆಗೆ ಪೊಲೀಸರು 10 ದಿನಗಳ ಕಾಲಾವಕಾಶ ಕೋರಿದ್ದು, ಕೋರ್ಟ್‌ ಫೆ. 6ರ ವರೆಗೆ ಕಾಲಾವಕಾಶ ನೀಡಿತು. 

Advertisement

Udayavani is now on Telegram. Click here to join our channel and stay updated with the latest news.

Next