Advertisement

ಉಗ್ರ ದಾಳಿ ವಿಫ‌ಲಗೊಳಿಸಿದ್ದ ಕಾಶ್ಮೀರ ಬಾಲಕ ಇರ್ಫಾನ್‌ಗೆ ಶೌರ್ಯ ಚಕ್ರ

09:53 AM Mar 19, 2019 | udayavani editorial |

ಹೊಸದಿಲ್ಲಿ : 2017ರಲ್ಲಿ ತನ್ನ ಮೇಲೆ ಉಗ್ರ ದಾಳಿ ನಡೆಸಿ ತನ್ನ ತಂದೆಯನ್ನು ಕೊಲ್ಲಲು ಬಂದಿದ್ದ ಮೂವರು ಉಗ್ರರ ವಿರುದ್ಧ ಅಪ್ರತಿಮ ಧೈರ್ಯ ಸಾಹಸ ತೋರಿ ಮೂವರಲ್ಲಿ ಒಬ್ಬ ಉಗ್ರನನ್ನು ಹೊಡೆದುರುಳಿಸಿ ಉಳಿದಿಬ್ಬರನ್ನು ಹಿಮ್ಮೆಟ್ಟಿಸಿ ಸ್ಥಳೀಯರಿಂದ ಹೀರೋ ಆಗಿ ಪ್ರಶಂಸಲ್ಪಟ್ಟಿದ್ದ,  ಅಂದು 14ರ ಹರೆಯದವನಾಗಿದ್ದ,  ಇರ್ಫಾನ್‌ ರಮ್ಜಾನ್‌ ಗೆ ರಾಷ್ಟ್ರಪತಿ ರಾಮ ನಾಥ್‌ ಕೋವಿಂದ್‌ ಅವರು ಇಂದು ಮಂಗಳವಾರ  ಶೌರ್ಯ ಚಕ್ರ ಪ್ರಶಸ್ತಿ ನೀಡಿ ಗೌರವಿಸಿದರು. 

Advertisement

ಉಗ್ರರು ನಡೆಸಿದ್ದ ಅಂದಿನ ದಾಳಿಯಲ್ಲಿ ಇರ್ಫಾನ್‌ ತಂದೆ ಶೇಖ್‌ ಅವರು ಗಾಯಗೊಂಡರೂ ಬದುಕುಳಿದಿದ್ದರು. 

ಇಂದು ಪ್ರಧಾನಿ ನರೇಂದ್ರ ಮೋದಿ ಮತ್ತು ಇತರ ಗಣ್ಯರನೇಕರ ಸಮ್ಮುಖದಲ್ಲಿ ರಾಷ್ಟ್ರಪತಿಗಳಿಂದ ಶೌರ್ಯ ಪ್ರಶಸ್ತಿ ಸ್ವೀಕರಿಸುವಾಗ ಹದಿಹರೆಯದ ಇರ್ಫಾನ್‌ ಮುಖದಲ್ಲಿ ಅದೇ ರೀತಿಯ ದಿಟ್ಟತನ, ಧೈರ್ಯ, ಉತ್ಸಾಹ ಕಂಡು ಬಂತು. 

Advertisement

Udayavani is now on Telegram. Click here to join our channel and stay updated with the latest news.

Next