Advertisement

ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ: ಇಬ್ಬರು ಶಿಕ್ಷಕರನ್ನು ಗುಂಡಿಟ್ಟು ಕೊಂದ ಉಗ್ರರು!

12:35 PM Oct 07, 2021 | Team Udayavani |

ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ ಉಗ್ರರು ಮತ್ತೆ ಅಟ್ಟಹಾಸ ಮೆರೆದಿದ್ದಾರೆ. ಇಬ್ಬರು ಶಿಕ್ಷಕರನ್ನು ಗುಂಡಿಟ್ಟು ಹತ್ಯೆ ಮಾಡಿದ ಮಾಡಿದ ಘಟನೆ ಶ್ರೀನಗರದಲ್ಲಿ ಗುರುವಾರ ನಡೆದಿದೆ.

Advertisement

“ಶ್ರೀನಗರ ಜಿಲ್ಲೆಯ ಸಂಗಮ್ ಈದ್ಗಾದಲ್ಲಿ ಬೆಳಿಗ್ಗೆ 11:15 ಕ್ಕೆ ಭಯೋತ್ಪಾದಕರು ಇಬ್ಬರು ಶಾಲಾ ಶಿಕ್ಷಕರನ್ನು ಹೊಡೆದುರುಳಿಸಿದರು” ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪ್ರದೇಶವನ್ನು ಸುತ್ತುವರಿಯಲಾಗಿದೆ. ಆರೋಪಿಗಳನ್ನು ಬಂಧಿಸಲು ತನಿಖೆ ಪ್ರಾರಂಭಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಮೃತಪಟ್ಟವರನ್ನು ಸಂಗಮದ ಸರ್ಕಾರಿ ಬಾಲಕರ ಹೈಯರ್ ಸೆಕೆಂಡರಿ ಶಾಲೆಯ ಪ್ರಿನ್ಸಿಪಾಲ್ ಸುಪಿಂದರ್ ಕೌರ್ (44 ವ) ಮತ್ತು ಶಿಕ್ಷಕ ದೀಪಕ್ ಚಂದ್ ಎಂದು ಗುರುತಿಸಲಾಗಿದೆ.

ಇಬ್ಬರನ್ನೂ ಸೌರಾದಲ್ಲಿರುವ ಸ್ಕಿಮ್ಸ್ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅವರು ಅದಾಗಲೇ ಮೃತಪಟ್ಟಿದ್ದರು ಎಂದು ವೈದ್ಯರು ಘೋಷಿಸಿದರು.

ಇದನ್ನೂ ಓದಿ:ನವರಾತ್ರಿ ಆರಂಭದಂದೇ ಬಿಎಸ್ ವೈ ಆಪ್ತರಿಗೆ ‘ಐಟಿ’ ಶಾಕ್: ಹಲವೆಡೆ ಅಧಿಕಾರಿಗಳ ದಾಳಿ

Advertisement

ಮಂಗಳವಾರ ಪ್ರಮುಖ ಉದ್ಯಮಿ ಮತ್ತು ಶ್ರೀನಗರದ ಇಕ್ಬಾಲ್ ಪಾರ್ಕ್‌ನ ಫಾರ್ಮಸಿಯ ಮಾಲೀಕರಾದ 70 ವರ್ಷದ ಮಖಾನ್ ಲಾಲ್ ಬಿಂದ್ರೂ ಅವರನ್ನು ಔಷಧಾಲಯದ ಒಳಗೆ ಸಂಜೆ 7 ಗಂಟೆ ಸುಮಾರಿಗೆ ಗುಂಡು ಹಾರಿಸಿ ಕೊಲೆ ಮಾಡಲಾಗಿತ್ತು.

ಕಾಶ್ಮೀರಿ ಪಂಡಿತರಾಗಿದ್ದ ಮಖಾನ್ ಲಾಲ್ ಬಿಂದ್ರೂ ಅವರು ಕಾಶ್ಮೀರದಲ್ಲಿಯೇ ಉಳಿದಿದ್ದರು. 1990ರ ಸಮಯಲ್ಲಿ ಭಯೋತ್ಪಾದನೆಯು ಉತ್ತುಂಗದಲ್ಲಿದ್ದಾಗಲೂ ತಮ್ಮ ಔಷಧಾಲಯವನ್ನು ನಡೆಸುತ್ತಿದ್ದರು.

ಶ್ರೀನಗರ ಪೇಟೆಯಲ್ಲಿ ಬೀದಿ ಆಹಾರ ಮಾರಾಟಗಾರ ಮತ್ತು ಬಂಡೀಪೋರಾದ ಟ್ಯಾಕ್ಸಿ ಸ್ಟ್ಯಾಂಡ್‌ನ ಅಧ್ಯಕ್ಷ ಮೊಹಮ್ಮದ್ ಶಾಫಿ ಎಂಬಾತನನ್ನು ಮಂಗಳವಾರ ಹತ್ಯೆ ಮಾಡಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next