Advertisement

ಜೆಹಾದಿ ಮಾಸ್ಟರ್‌ ಮೈಂಡ್‌ ಸೆರೆ : ಬೆಂಗಳೂರಿನಲ್ಲಿ ಪೊಲೀಸರ ಕಾರ್ಯಾಚರಣೆ

09:59 AM Jan 17, 2020 | sudhir |

ಬೆಂಗಳೂರು: ರಾಜ್ಯದಲ್ಲಿ ಐಸಿಸ್‌ ಪ್ರೇರಿತ ಜೆಹಾದಿ ಚಟುವಟಿಕೆಯನ್ನು ಸಕ್ರಿಯಗೊಳಿಸಿದ ಮಾಸ್ಟರ್‌ ಮೈಂಡ್‌ ಮನ್ಸೂರ್‌ ಖಾನ್‌ನನ್ನು ಬೆಂಗಳೂರು ಸಿಸಿಬಿ ಹಾಗೂ ತಮಿಳುನಾಡು ಪೊಲೀಸರು ಬಂಧಿಸಿದ್ದಾರೆ.

Advertisement

ರಾಜ್ಯದ ಐಸಿಸ್‌ ಪ್ರಮುಖ ಮೆಹಬೂಬ್‌ ಪಾಷಾನ ಆಪ್ತನಾಗಿರುವ ಮನ್ಸೂರ್‌ ಖಾಸಗಿ ಶಾಲೆಯೊಂದರ ಬಸ್‌ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದ. ರಾಜ್ಯದಲ್ಲಿ ಐಸಿಸ್‌ ಪ್ರೇರಿತನಾಗಿದ್ದ ಮನ್ಸೂರ್‌ ಖಾನ್‌ ರಾಜ್ಯದ ಜೆಹಾದಿ ಚಟುವಟಿಕೆಗಳನ್ನು ಬಲಗೊಳಿಸಲು ಯುವಕರನ್ನು ಸಂಘಟಿಸಿದ್ದ. ಈ ಸಂಬಂಧ ಗುರಪ್ಪನಪಾಳ್ಯದ ನಿವಾಸದಲ್ಲಿ ಹಲವು ಸಭೆಗಳನ್ನು ನಡೆಸಿದ್ದ ಎಂಬುದು ತನಿಖೆಯಲ್ಲಿ ಗೊತ್ತಾಗಿದೆ ಎಂದು ಮೂಲಗಳು ಹೇಳಿವೆ.

ಮನ್ಸೂರ್‌ ಖಾನ್‌ ಜೆಹಾದಿ ಚಟುವಟಿಕೆಗಳಿಗೆ ತನ್ನ ಸ್ವಂತ ಸಹೋದರ ಮೊಹಮದ್‌ ಹನೀಫ್ನನ್ನು ಸಜ್ಜುಗೊಳಿಸಿದ್ದ ಎಂದು ತಿಳಿದು ಬಂದಿದೆ. ಕೆಲವು ದಿನಗಳ ಹಿಂದೆ ಚೆನ್ನೈಯ “ಕ್ಯು’ ಬ್ರಾಂಚ್‌ ಪೊಲೀಸರಿಂದ ಇನ್ನೊಬ್ಬ ಶಂಕಿತ ಉಗ್ರ ಹನೀಫ್ ಬಂಧನಕ್ಕೆ ಒಳಗಾಗಿದ್ದಾನೆ.

Advertisement

Udayavani is now on Telegram. Click here to join our channel and stay updated with the latest news.

Next