Advertisement

ಜಾಲಹಳ್ಳಿ ಜಿಪಂ: ನಾಳೆ ಮತದಾನ

02:19 PM Oct 27, 2018 | Team Udayavani |

ದೇವದುರ್ಗ: ಜಾಲಹಳ್ಳಿ ಜಿಪಂ ಕ್ಷೇತ್ರದ ಸದಸ್ಯ ಗುರುರಾಜ ದೇಸಾಯಿ ನಿಧನದಿಂದ ತೆರವಾದ ಸ್ಥಾನಕ್ಕೆ ಉಪಚುನಾವಣೆ ನಡೆಯುತ್ತಿದ್ದು, ಅ. 28ರಂದು ಬೆಳಗೆ 7:00ರಿಂದ 5:00ರ ವರೆಗೆ ಮತದಾನ ನಡೆಯಲಿದೆ ಎಂದು ಸಹಾಯಕ ಚುನಾಣಾಧಿಕಾರಿ, ತಹಶೀಲ್ದಾರ್‌ ಶಿವಶರಣಪ್ಪ ಕಟ್ಟೋಳಿ ತಿಳಿಸಿದರು.

Advertisement

ಪಟ್ಟಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಂತಿಯುತ ಮತದಾನಕ್ಕೆ ತಾಲೂಕು ಆಡಳಿತ ಈಗಾಗಲೇ ಸಕಲ ಸಿದ್ಧತೆ ಮಾಡಿಕೊಂಡಿದೆ. ಒಟ್ಟು 27054 ಮತದಾರರು ಇದ್ದಾರೆ. ಇದರಲ್ಲಿ 13192 ಪುರುಷರು, 13857 ಮಹಿಳೆಯರು ಮತ್ತು ಐವರು ಇತರೆ ಮತದಾರರು ಇದ್ದಾರೆ ಎಂದು ತಿಳಿಸಿದರು. 

ಒಟ್ಟು 31 ಮತಗಟ್ಟೆ ಸ್ಥಾಪಿಸಲಾಗಿದೆ. ಅದರಲ್ಲಿ ಅತಿಸೂಕ್ಷ್ಮ 10, ಸೂಕ್ಷ್ಮ 7, ಸಾಮಾನ್ಯ 14. ಚುನಾವಣೆ ಕರ್ತವ್ಯಕ್ಕೆ 175 ಸಿಬ್ಬಂದಿ ನಿಯೋಜಿಸಲಾಗಿದೆ. ಚುನಾವಣೆ ನಡೆಯುವ ಪ್ರತಿಯೊಂದು ಮತಗಟ್ಟೆ ಕೇಂದ್ರಗಳಿಗೆ ಈಗಾಗಲೇ ಅಗತ್ಯ ಸೌಲಭ್ಯ ಒದಗಿಸಲಾಗಿದೆ. ಅಂಗವಿಕ ಮತದಾರರಿಗೆ ಮತಗಟ್ಟೆಗೆ ಹೋಗಲು ರ್‍ಯಾಂಪ್‌ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಬಂದೋಬಸ್ತ್ಗಾಗಿ ನಾಲ್ವರು ಪಿಎಸ್‌ಐ, ಐವರು ಎಎಸ್‌ಐ,
17 ಜನ ಹೆಡ್‌ ಕಾನಸ್ಟೇಬಲ್‌, 31 ಜನ ಪೊಲೀಸರು, 24 ಜನ ಹೋಮ್‌ ಗಾರ್ಡ್‌ ನಿಯೋಜಿಸಲಾಗಿದೆ. ಅತಿ ಸೂಕ್ಷ್ಮ ಕೇಂದ್ರಗಳಲ್ಲಿ ದೃಶ್ಯ ಸೆರೆ ಹಿಡಿಯಲು ಪ್ರತಿ ಕೇಂದ್ರದಲ್ಲಿ ಚಿತ್ರಿಕರಣ ಮಾಡಲಾಗುತ್ತದೆ. ಮಿನಿವಿಧಾನಸೌಧ ಸಭಾಂಗಣದಲ್ಲಿ ಅ. 31ರಂದು ಬೆಳಗ್ಗೆ 8:00ಕ್ಕೆ ಮತ ಎಣಿಕೆ ನಡೆಯಲಿದೆ ಎಂದು ತಿಳಿಸಿದರು. 

ಜಾಲಹಳ್ಳಿ: ಜಾಲಹಳ್ಳಿ ಜಿಪಂ ಕ್ಷೇತ್ರಕ್ಕೆ ಅ. 28ರಂದು ನಡೆಯಲಿರುವ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ವೀರಣ್ಣ ಪಾಣಿ ಗೆಲುವು ಖಚಿತವಾಗಿದೆ ಎಂದು ಶಾಸಕ ಕೆ. ಶಿವನಗೌಡ ನಾಯಕ ಹೇಳಿದರು.

ಪಟ್ಟಣದ ಪ್ರಮುಖ ಬೀದಿಗಳಲ್ಲಿ ಶುಕ್ರವಾರ ರೋಡ್‌ ಶೋ ಮೂಲಕ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ನಡೆಸಿ ನಂತರ ಅವರು ಮಾತನಾಡಿದರು. ತಾವು ಮಂತ್ರಿಗಳಾಗಿ ಹಾಗೂ ಶಾಸಕರಾಗಿ ಜಾಲಹಳ್ಳಿ ಜಿಪಂ ವ್ಯಾಪ್ತಿಯ ಹಳ್ಳಿಗಳಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದೇನೆ. ಜಾಲಹಳ್ಳಿ ರಂಗನಾಥ ದೇವಸ್ಥಾನದ ಎರಡು ಗೋಪುರಗಳ ನಿರ್ಮಾಣ, ಅಂಬಿಗೇರ ಚೌಡಯ್ಯ ಭವನ, ವಾಲ್ಮೀಕಿ ಭವನ, ಹೈಟೆಕ್‌ ಗ್ರಂಥಾಲಯ ಕಟ್ಟಡ, ಸೂಮಾರು 30 ಕೋಟಿ ರೂ. ವೆಚ್ಚದಲ್ಲಿ ಸಿಸಿ ರಸ್ತೆ ಹಾಗೂ ಚರಂಡಿ ನಿರ್ಮಾಣ, ಶಾಲಾ ಕಟ್ಟಡಗಳು, ಬಸ್‌ ನಿಲ್ದಾಣ ನಿರ್ಮಾಣ, ಶುದ್ಧ ಕುಡಿಯುವ ನೀರಿನ ಘಟಕಗಳು, ವರಟಿ ಮಾರುತಿ ದೇವಸ್ಥಾನ, ಯಲ್ಲಮ್ಮ ದೇವರ ಮನೆ ನಿರ್ಮಾಣ ಸೇರಿದಂತೆ ಹಲವಾರು ದೇಗುಲಗಳ ಜೀರ್ಣೋದ್ದಾರ ಮಾಡಲಾಗಿದೆ. ಕ್ಷೇತ್ರ ವ್ಯಾಪ್ತಿಯ ಮುದುಗೋಟ, ಲಿಂಗದಳ್ಳಿ, ಹೇರುಂಡಿ, ಬಾಗೂರು, ಮೇದಿನಾಪುರು, ಪರಾಪುರು, ಮುಕ್ಕನಾಳ ಗ್ರಾಮಗಳ ರಸ್ತೆ ಡಾಂಬರೀಕರಣ ಸೇರಿದಂತೆ ನೂರಾರು ಅಭಿವೃದ್ಧಿ ಕೆಲಸ ಮಾಡಿದ್ದೇನೆ. ನಮ್ಮ ಅಭಿವೃದ್ಧಿ ಕೆಲಸಗಳೇ ಬಿಜೆಪಿ ಅಭ್ಯರ್ಥಿ ಗೆಲವಿಗೆ ಶ್ರೀರಕ್ಷೆ ಆಗಿದೆ ಎಂದು ಹೇಳಿದರು.

Advertisement

ತಾಪಂ ಅಧ್ಯಕ್ಷ ಹನುಮಂತ ಕಟ್ಟಿಮನಿ, ಗೋವಿಂದರಾಜ ತಿಮ್ಮಾಪುರು, ಬಿಜೆಪಿ ಮಂಡಲದ ಅಧ್ಯಕ್ಷ ಪ್ರಕಾಶ ಪಾಟೀಲ, ಚಂದಪ್ಪ ಬುದ್ದಿನ್ನಿ, ಮುಖಂಡರಾದ ಅಮರೇಶ ಪಾಟೀಲ, ನಸೀರಸಾಬ್‌ ಮುಲ್ಲಾ, ವೆಂಕನಗೌಡ ಪಾಟೀಲ, ಭೀಮಣ್ಣ ನಾಡಗೌಡ ಚಿಂಚೋಡಿ, ವಿ.ಎಂ. ಮೇಟಿ, ಜಂಬಣ್ಣ ನಿಲೋಗಲ್‌, ಬಸವರಾಜ ಪಾಟೀಲ ಗಾಣದಾಳ ಭಾಗವಹಿಸಿದ್ದರು. 

 ಕಾಂಗ್ರೆಸ್‌ ಅಭ್ಯರ್ಥಿ ಪ್ರಚಾರ: ಕಾಂಗ್ರಸ್‌ ಪಕ್ಷದ ಅಭ್ಯರ್ಥಿ ವಿಠೊಬ ನಾಯಕ ಕಾರ್ಯಕರ್ತರೊಂದಿಗೆ ಗ್ರಾಮದಲ್ಲಿ ಮನೆ, ಮನೆಗೆ ತೆರಳಿ ಮತ ಯಾಚಿಸಿದರು. ಕಾಂಗ್ರೆಸ್‌ ಪಕ್ಷದ ಜಿಲ್ಲಾಧ್ಯಕ್ಷ ರಾಮಣ್ಣ ಇರಬಗೇರ, ಜಾಲಹಳ್ಳಿ ಬ್ಲಾಕ್‌ ಅಧ್ಯಕ್ಷ ಆದನಗೌಡ ಪಾಟೀಲ, ವೇಣುಗೋಪಾಲಗೌಡ ವಕೀಲರು, ಬಸವರಾಜ ಹೇರುಂಡಿ, ಶರಣಗೌಡ ಗಣೇಕಲ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next