Advertisement

ಕೋವಿಡ್-19 ಗೆದ್ದ ಮರುದಿನವೇ ಸಚಿವ ಸೋಂಕಿಗೆ ಬಲಿ

03:25 PM Oct 04, 2020 | keerthan |

ರಾಂಚಿ: ಕೋವಿಡ್-19 ಸೋಂಕಿನಿಂದ ಚೇತರಿಸಿಕೊಂಡ ಮರುದಿನವೇ ಜಾರ್ಖಂಡ್‌ನ‌ ಅಲ್ಪಸಂಖ್ಯಾತ ಕಲ್ಯಾಣ ಖಾತೆ ಸಚಿವ ಹಾಜಿ ಹುಸೇನ್‌ ಅನ್ಸಾರಿ ತೀವ್ರ ಉಸಿರಾಟ ತೊಂದರೆಯಿಂದ ಶನಿವಾರ ಕೊನೆಯುಸಿರೆಳೆದಿದ್ದಾರೆ.

Advertisement

ರಾಂಚಿಯ ಮೇದಾಂತ ಆಸ್ಪತ್ರೆಯಲ್ಲಿ ನಿಧನರಾದ 73 ವರ್ಷದ ಅನ್ಸಾರಿ, ಸಿಎಂ ಹೇಮಂತ್‌ ಸೊರೆನ್‌ ಸರ್ಕಾರದಲ್ಲಿ ಎರಡನೇ ಬಾರಿಗೆ ಸಚಿವರಾಗಿದ್ದರು. ಇತ್ತೀಚೆಗಷ್ಟೇ ಅವರಿಗೆ ಕೋವಿಡ್-19 ಸೋಂಕು ದೃಢಪಟ್ಟ ಕಾರಣ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಶುಕ್ರವಾರವಷ್ಟೇ ಅವರಿಗೆ ಕೋವಿಡ್ ನೆಗೆಟಿವ್‌ ಎಂದು ವರದಿ ಬಂದಿತ್ತು.

ಇದನ್ನೂ ಓದಿ:ಕೋವಿಡ್ ಸೋಂಕು: ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೆ ಐಸಿಯು ನಲ್ಲಿ ಚಿಕಿತ್ಸೆ

ಸಚಿವರ ನಿಧನಕ್ಕೆ ಸಂತಾಪ ಸೂಚಿಸಿರುವ ಸಿಎಂ ಹೇಮಂತ್‌ ಸೊರೆನ್‌, “ಅನ್ಸಾರಿ ಅಗಲಿಕೆಯಿಂದ ತುಂಬಾ ಆಘಾತವಾಗಿದೆ. ಜಾರ್ಖಂಡ್‌ ಪ್ರತ್ಯೇಕ ರಾಜ್ಯವಾಗುವಲ್ಲಿ ಅವರು ಪ್ರಮುಖ ಪಾತ್ರ ನಿರ್ವಹಿಸಿದ್ದರು’ ಎಂದು ಸ್ಮರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next