Advertisement

ಜಾರ್ಖಂಡ್‌ ಮಾವೋವಾದಿ ನಾಯಕನ ಮಹಾರಾಷ್ಟ್ರದಲ್ಲಿ ಬಂಧನ

05:06 PM Sep 18, 2022 | Team Udayavani |

ಮುಂಬಯಿ: ತನ್ನ ಮೇಲೆ ಸುಮಾರು 15 ಲಕ್ಷ ರೂ. ಬಹುಮಾನ ಹೊತ್ತಿದ್ದ ಜಾರ್ಖಂಡ್‌ ಮಾವೋವಾದಿ ನಾಯಕನನ್ನು ಮಹಾರಾಷ್ಟ್ರದ ಭಯೋತ್ಪಾದನಾ ನಿಗ್ರಹ ದಳವು ರವಿವಾರ ಪಾಲ್ಘರ್ ಜಿಲ್ಲೆಯಿಂದ ಬಂಧಿಸಿದೆ ಎಂದು ಎಟಿಎಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Advertisement

ಮಾವೋವಾದಿ ಕರು ಹುಲಾಸ್‌ ಯಾದವ್‌ (45) ಜಾರ್ಖಂಡ್‌ನ‌ಲ್ಲಿ ನಿಷೇಧಿತ ಸಿಪಿಐ (ಮಾವೋವಾದಿ) ಪ್ರಾದೇಶಿಕ ಸಮಿತಿ ಸದಸ್ಯರಾಗಿದ್ದರು. ಮುಂಜಾನೆಯ ಕಾರ್ಯಾಚರಣೆಯಲ್ಲಿ, ಎಟಿಎಸ್‌ ಅಧಿಕಾರಿಗಳು ನಲಸೋಪಾರಾ ಪ್ರದೇಶದ ಚಾಲ್‌ ಮೇಲೆ ದಾಳಿ ನಡೆಸಿ ಬಂಧಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಜಾರ್ಖಂಡ್‌ನ‌ ಹಜಾರಿಬಾಗ್‌ನ ನಿವಾಸಿಯಾದ ಯಾದವ್‌, ವೈದ್ಯಕೀಯ ಚಿಕಿತ್ಸೆಗಾಗಿ ಮಹಾರಾಷ್ಟ್ರಕ್ಕೆ ಬಂದಿದ್ದ ಎಂದು ಅವರು ಹೇಳಿದರು. ಕಾರ್ಯಾಚರಣೆಯ ಬಗ್ಗೆ ಜಾರ್ಖಂಡ್‌ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಹೆಚ್ಚಿನ ವಿಚಾರಣೆ ನಡೆಯುತ್ತಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next