Advertisement

ಝಾರ್ಖಂಡ್‌ ಮುಖ್ಯಮಂತ್ರಿ ರಘುಬರ್‌ಗೆ ತಲೆನೋವು

09:26 AM Nov 19, 2019 | Team Udayavani |

ಜಮ್ಶೆಡ್‌ಪುರ: ವಿಧಾನಸಭೆ ಚುನಾವಣೆಗೆ ಸಜ್ಜಾಗಿರುವ ಝಾರ್ಖಂಡ್‌ನ‌ಲ್ಲಿ ಸಿಎಂ ರಘುಬರ್‌ ದಾಸ್‌ಗೆ ಹೊಸ ತಲೆನೋವು ಶುರುವಾಗಿದೆ. ಈವರೆಗೆ ಘೋಷಿಸಲಾದ 72 ಅಭ್ಯರ್ಥಿಗಳ ಪಟ್ಟಿಯಲ್ಲಿ ತಮ್ಮ ಹೆಸರಿಲ್ಲ ಎಂದು ಕೋಪಗೊಂಡಿರುವ ಬಿಜೆಪಿ ಹಿರಿಯ ನಾಯಕ ಸರಯೂ ರಾಯ್‌ ಅವರು ಈಗ ಸಿಎಂ ರಘುಬರ್‌ ವಿರುದ್ಧವೇ ಕಣಕ್ಕಿಳಿಯುವುದಾಗಿ ಘೋಷಿಸಿದ್ದಾರೆ.

Advertisement

ಝಾರ್ಖಂಡ್‌ ಸರಕಾರದಲ್ಲಿ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವರಾಗಿರುವ ರಾಯ್‌, ಸೋಮವಾರ ತಾವು ಜೆಮ್ಶೆಡ್‌ಪುರ ಪೂರ್ವ ಮತ್ತು ಜೆಮ್ಶೆಡ್‌ಪುರ ಪಶ್ಚಿಮ ಎರಡೂ ಕ್ಷೇತ್ರಗಳಿಂದ ನಾಮಪತ್ರ ಸಲ್ಲಿಸಲಿದ್ದು, ಸಂಪುಟಕ್ಕೆ ರಾಜೀನಾಮೆ ನೀಡುವುದಾಗಿ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next