Advertisement

ವೃದ್ಧೆ ಬ್ಯಾಗ್‌ನಲ್ಲಿದ್ದ ಚಿನ್ನಾಭರಣದ ಡಬ್ಬಿ ಕದ್ದ ಕದೀಮರು

07:17 PM Jul 11, 2021 | Team Udayavani |

ಹುಬ್ಬಳ್ಳಿ: ಕೇಶ್ವಾಪುರ ಕುಸುಗಲ್ಲ ರಸ್ತೆ ಮುದಗಲ್ಲ ಪ್ಲಾಟ್‌ನ ವೃದ್ಧೆಯೊಬ್ಬರು ಗುರುವಾರ ಮಧ್ಯಾಹ್ನ ರೈಲ್ವೆ ನಿಲ್ದಾಣಕ್ಕೆ ಬಂದು ರೈಲು ಹತ್ತುವುದರೊಳಗೆ ಅವರ ವ್ಯಾನಿಟಿ ಬ್ಯಾಗ್‌ನ ಪ್ಲಾಸ್ಟಿಕ್‌ ಡಬ್ಬಿಯಲ್ಲಿಟ್ಟಿದ್ದ ಅಂದಾಜು 1.96 ಲಕ್ಷ ರೂ. ಮೌಲ್ಯದ 56ಗ್ರಾಂ ಚಿನ್ನಾಭರಣವನ್ನು ಕಳ್ಳರು ಕದ್ದಿದ್ದಾರೆ.

Advertisement

ಸಬೀಹಾಬಾನು ಮುಲ್ಲಾ ಎಂಬುವರು ಹೊಸಪೇಟೆಯಲ್ಲಿನ ತಮ್ಮ ಸಂಬಂಧಿಕರ ಮದುವೆ ಕಾರ್ಯಕ್ರಮಕ್ಕೆ ಹೋಗಲು ರೈಲ್ವೆ ನಿಲ್ದಾಣಕ್ಕೆ ಬಂದಿದ್ದರು. ಜೋಧಪುರ-ಬೆಂಗಳೂರು ಎಕ್ಸ್‌ಪ್ರೆಸ್‌ ರೈಲು ಹತ್ತಿ ಕುಳಿತುಕೊಳ್ಳುವಾಗ ವ್ಯಾನಿಟಿ ಬ್ಯಾಗ್‌ನಲ್ಲಿದ್ದ ಮೊಬೈಲ್‌ ತೆಗೆದುಕೊಳ್ಳಲು ಹೋದಾಗ ಅದರಲ್ಲಿ ಚಿನ್ನಾಭರಣವಿದ್ದ ಪ್ಲಾಸ್ಟಿಕ್‌ ಡಬ್ಬಿಯನ್ನೇ ಕದೀಮರು ಕಳವು ಮಾಡಿದ್ದು ಗಮನಕ್ಕೆ ಬಂದಿದೆ. ಆಮೇಲೆ ಅವರು ಗದಗ ವರೆಗೆ ಹೋಗಿ ಮರಳಿ ನಗರಕ್ಕೆ ಬಂದಿದ್ದಾರೆ. ಈ ಕುರಿತು ಹುಬ್ಬಳ್ಳಿ ರೈಲ್ವೆ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next