Advertisement

ಜೇವರ್ಗಿ: ಗ್ರಾಪಂ ಚುನಾವಣೆ ಫಲಿತಾಂಶ

10:02 AM Jun 18, 2018 | Team Udayavani |

ಜೇವರ್ಗಿ: ತಾಲೂಕಿನ ಮದರಿ, ಕರಕಿಹಳ್ಳಿ ಹಾಗೂ ರಂಜಣಗಿ ಗ್ರಾಪಂ ಚುನಾವಣೆ ಮತ ಎಣಿಕೆ ರವಿವಾರ ನಡೆದು, ಫಲಿತಾಂಶ ಪ್ರಕಟವಾಯಿತು.

Advertisement

ಕರಕಿಹಳ್ಳಿ ಗ್ರಾಪಂ ಚುನಾವಣೆಯ 7 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬೆಣ್ಣೂರ ಗ್ರಾಮದಿಂದ ಬಿಜೆಪಿ ಬೆಂಬಲಿತ ದೇವಕ್ಕಿ ಶಿವಾನಂದ, ಭಾಗಮ್ಮ ಮುತ್ತಪ್ಪ, ವಸ್ತಾರಿ ಗ್ರಾಮದಿಂದ ಬಿಜೆಪಿ ಬೆಂಬಲಿತ ದೊಡ್ಡಪ್ಪಗೌಡ ಮಾಲಿಪಾಟೀಲ, ದ್ರೌಪತಿ ಸಂಜೀವಕುಮಾರ, ವರವಿ ಗ್ರಾಮದಿಂದ ಬಿಜೆಪಿ ಬೆಂಬಲಿತ ಶಿವಾನಂದಗೌಡ ಮಾಲಿಪಾಟೀಲ, ಶಮಸುದ್ದೀನ್‌ ಮುಲ್ಲಾ ಜಯಶಾಲಿಯಾಗಿದ್ದಾರೆ.

ಹರನಾಳ ಗ್ರಾಮದಿಂದ ಕಾಂಗ್ರೆಸ್‌ ಬೆಂಬಲಿತ ಅನುಸೂಯಾ ಮಹಾಲಿಂಗಪ್ಪ ಜಯಗಳಿಸಿದ್ದಾರೆ.ಮದರಿ ಗ್ರಾಪಂನ 8 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕಟ್ಟಿಸಂಗಾವಿ ಗ್ರಾಮದ ಕಾಂಗ್ರೆಸ್‌ ಬೆಂಬಲಿತ ರೇಖಾ ಸಂಗಣ್ಣ, ಸಯ್ಯದಸಾಬ ಸುಲ್ತಾನಸಾಬ, ಮರೆಮ್ಮ ಭೀಮರಾಯ, ಪದ್ಮಣ್ಣ ಪೂಜಾರಿ ಜಯಗಳಿಸಿದ್ದಾರೆ. ಬಿಜೆಪಿ ಬೆಂಬಲಿತ ಮಲಕಣ್ಣ ಸಿದ್ದಣ್ಣ ಗೆಲುವು ಸಾಧಿಸಿದ್ದಾರೆ. ಯನಗುಂಟಿ ಗ್ರಾಮದಿಂದ ಬಿಜೆಪಿ ಬೆಂಬಲಿತ ಈರಮ್ಮ ಚಂದ್ರಶ್ಯಾ, ಈಶಮ್ಮ ಸುಭಾಷ, ಸಂತೋಷಗೌಡ ಮಲ್ಲನಗೌಡ ಜಯಸಾಧಿಸಿದ್ದಾರೆ.

ರಂಜಣಗಿ ಗ್ರಾಪಂನ 17 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ರಂಜಣಗಿ ಗ್ರಾಮದ ಬಿಜೆಪಿ ಬೆಂಬಲಿತ ನೀಲಮ್ಮ ಭಾಗಪ್ಪ, ಲಾಲಪಟೇಲ ಹಸನಸಾಬ, ಸಾವಿತ್ರಿ ನಿಂಗಣ್ಣಗೌಡ, ಕಾಂಗ್ರೆಸ್‌ ಬೆಂಬಲಿತ ಕವಿತಾ ಪಂಡಿತ್‌ ಪವಾರ, ಜಗದೇವಿ ಸಿದ್ದಪ್ಪ ಜಯಸಾಧಿ ಸಿದ್ದಾರೆ. ದೇಸಣಗಿಯ ಕಾಂಗ್ರೆಸ್‌ ಬೆಂಬಲಿತ ಜಿಲಾನಿಪಾಶಾ ಗುಲಾಮ ಮಕಾಶಿ, ಆಸ್ಮಾಬೇಗಂ ಉಸ್ಮಾನಭಾಷಾ ಯಾತನೂರ, ಜೆಡಿಎಸ್‌ ಬೆಂಬಲಿತ ಮುತ್ತುರಾಜ ಸಿದ್ದಣ್ಣ, ಶಿವಬಸಯ್ಯ ಬಸಯ್ಯ ಮಠಪತಿ, ರೇಷ್ಮಾ ಪ್ರದೀಪ, ರೇಣುಕಾ ಶರಣಗೌಡ ಭೋಮ್ಮನಜೋಗಿ, ಚುನಾಯಿತರಾಗಿದ್ದಾರೆ.

ಮುರಗಾನೂರ ಗ್ರಾಮದ ಸಿದ್ದಮ್ಮ ಶಿವಪುತ್ರಪ್ಪ, ಸಿದ್ದಣ್ಣ ಬಾಲಪ್ಪಗೋಳ, ದ್ಯಾವಪ್ಪ ಬೂಗದಡಿ, ಪಾರ್ವತಿ
ಮಡಿವಾಳಪ್ಪ, ಕಾಶಿಬಾಯಿ ಸುಭಾಶ್ಚಂದ್ರ, ಕಾಂತಪ್ಪ ಮಹಾದೇವಪ್ಪ ಚುನಾಯಿತರಾಗಿದ್ದಾರೆ. ಮದರಿ ಗ್ರಾಪಂನಲ್ಲಿ ಒಟ್ಟು 14 ಸ್ಥಾನಗಳ ಪೈಕಿ 6 ಅವಿರೋಧ, 8 ಸ್ಥಾನಗಳಿಗೆ ಚುನಾವಣೆ, ರಂಜಣಗಿ ಗ್ರಾಪಂನಲ್ಲಿ ಒಟ್ಟು 21 ಸ್ಥಾನಗಳ ಪೈಕಿ 4 ಅವಿರೋಧ, 17 ಸ್ಥಾನಗಳಿಗೆ ಚುನಾವಣೆ ಹಾಗೂ ಕರಕಿಹಳ್ಳಿ ಗ್ರಾಪಂನಲ್ಲಿ ಒಟ್ಟು 17 ಸ್ಥಾನಗಳ ಪೈಕಿ 10 ಅವಿರೋಧ, 7 ಸ್ಥಾನಗಳಿಗೆ ಚುನಾವಣೆ ನಡೆದಿತ್ತು.

Advertisement

ವಿಜಯೋತ್ಸವ: ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಜಯಸಾಧಿಸಿದ ನಂತರ ಬಿಜೆಪಿ ಜಿಲ್ಲಾಧ್ಯಕ್ಷ ದೊಡ್ಡಪ್ಪಗೌಡ
ಪಾಟೀಲ ನೇತೃತ್ವದಲ್ಲಿ ವಿಜಯೋತ್ಸವ ಆಚರಿಸಲಾಯಿತು. ಮುಖಂಡರಾದ ರಮೇಶಬಾಬು ವಕೀಲ, ಷಣ್ಮುಖಪ್ಪ
ಸಾಹು ಗೋಗಿ, ಭಗವಚಿತ್ರಾಯ ಬೆಣ್ಣೂರ, ಬಾಪುಗೌಡ ಬಿರಾಳ, ಮಹಾಂತಪ್ಪ ಸಾಹು ಹರವಾಳ, ಸುನೀಲ ಸಜ್ಜನ,
ಅಕ್ಬರ್‌ ಸಾಬ ಮುಲ್ಲಾ, ಅಂಬರೀಶ ರಾಠೊಡ ಹಾಗೂ ಮತ್ತಿತರರು ಇದ್ದರು.

ಕಾಂಗ್ರೆಸ್‌: ಕಾಂಗ್ರೆಸ್‌ ಮುಖಂಡ ರಾಜಶೇಖರ ಸೀರಿ ನೇತೃತ್ವದಲ್ಲಿ ಕಾಂಗ್ರೆಸ್‌ ಕಚೇರಿ ಎದುರು ಪಟಾಕಿ ಸಿಡಿಸಿ ಸಿಹಿ
ವಿತರಿಸಿ ವಿಜಯೋತ್ಸವ ಆಚರಿಸಲಾಯಿತು. ನೀಲಕಂಠ ಅವುಂಟಿ, ರವಿ ಕೋಳಕೂರ, ಶರಣು ಗುತ್ತೇದಾರ, ಪ್ರಕಾಶ
ಫುಲಾರೆ, ಮಹಿಮೂದ್‌ ನೂರಿ, ರಹೇಮಾನ ಪಟೇಲ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next