Advertisement

ಪಾಕ್‌ ಜನನಿಬಿಡ ತಾಣಕ್ಕೆ ಜೈಶ್‌ ಉಗ್ರರು ಶಿಫ್ಟ್: ಪ್ರಜೆಗಳೇ ಗುರಾಣಿ

12:30 PM Feb 18, 2019 | Team Udayavani |

ಹೊಸದಿಲ್ಲಿ : 40 ಯೋಧರನ್ನು ಬಲಿಪಡೆಯಲಾಗಿರುವ ಪುಲ್ವಾಮಾ ಉಗ್ರ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನಾ ಪಡೆ ಪಿಓಕೆಯಲ್ಲಿನ ತಮ್ಮ ತಾಣಗಳ ಮೇಲೆ ಭಾರೀ ಪ್ರಮಾಣದ ದಾಳಿ ನಡೆಸಬಹುದೆನ್ನುವ ಲೆಕ್ಕಾಚಾರದಲ್ಲಿ ಜೈಶ್‌ ಎ ಮೊಹಮ್ಮದ್‌ ಸಂಘಟನೆಯ ಉಗ್ರರು ತಮ್ಮ ಅಡಗುದಾಣಗಳನ್ನು ಪಾಕಿಸ್ಥಾನದ ಜನನಿಬಿಡ ಪ್ರದೇಶಗಳಿಗೆ ಸ್ಥಳಾಂತರಿಸಿರುವುದಾಗಿ ವರದಿಗಳು ಹೇಳಿವೆ. 

Advertisement

ಜನನಿಬಿಡ ತಾಣಗಳ ಮೇಲೆ ಭಾರತ ದಾಳಿ ಮಾಡುವುದಿಲ್ಲ ಎಂಬ ಕಾರಣಕ್ಕೆ ತನ್ನ ದೇಶದ ಜನರನ್ನೇ ಗುರಾಣಿಯಾಗಿ ಬಳಸಿಕೊಳ್ಳುವ ನೀಚತನವನ್ನು ಜೈಶ್‌ ಉಗ್ರರು ತೋರಿರುವುದು ಅವರ ಈ ನಡೆಯಲ್ಲಿ ಸ್ಪಷ್ಟವಿದೆ ಎಂದು ಮೂಲಗಳು ತಿಳಿಸಿವೆ. 

ಜೈಶ್‌ ಉಗ್ರರ ಅಡಗು ದಾಣಗಳ ಸ್ಥಳಾಂತರ ಕಳೆದ ಸೋಮವಾರ ರಾತ್ರಿಯಿಂದಲೇ ಚುರುಕಿನಿಂದ ನಡೆಯುತ್ತಿದೆ.

ಭಾರತೀಯ ಸೇನಾ ಪಡೆಗಳು ನಡೆಸಿರುವ ಉಗ್ರ ನಿಗ್ರಹ ಕಾರ್ಯಾಚರಣೆಯಲ್ಲಿ ಇಂದು ಜೈಶ್‌ ಎ ಮೊಹಮ್ಮದ್‌ನ ಟಾಪ್‌ ಉಗ್ರ ಅಬ್ದುಲ್‌ ರಶೀದ್‌ ಗಾಜಿ ಅಲಿಯಾಸ್‌ ಕಮ್ರಾನ್‌ ಹತನಾಗಿದ್ದಾನೆ. ಈತ ಪುಲ್ವಾಮಾ ದಾಳಿಯ ಮಾಸ್ಟರ್‌ ಮೈಂಡ್‌ . 

ಆದರೆ ಇದೇ ವೇಳೆ ಮೇಜರ್‌ ವಿಭೂತಿ ಶಂಕರ್‌ ಧೌಂಡಿಯಾಲ್‌ ಮತ್ತು ಇತರ ಮೂವರು ಯೋಧರಾದ ಹವಾಲ್ದಾರ್‌ ಶಿವರಾಮ್‌, ಸಿಪಾಯ್‌ ಅಜಯ್‌ ಕುಮಾರ್‌ ಮತ್ತು ಸಿಪಾಯ್‌ ಹರಿ ಸಿಂಗ್‌ ಅವರು ಇಂದು ಸೋಮವಾರ ಹುತಾತ್ಮರಾಗಿದ್ದಾರೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next