Advertisement

ಚಿಂಚೋಳಿ‌: ವಿವಿಧ ಬೇಡಿಕೆಯ ‌ಈಡೇರಿಕೆಗಾಗಿ ಆಗ್ರಹಿಸಿ ಜೆಡಿಎಸ್ ‌ಕಾರ್ಯಕರ್ತರ‌ ಪ್ರತಿಭಟನೆ

01:26 PM Apr 11, 2022 | Team Udayavani |

ಕಲಬುರಗಿ: ಜಿಲ್ಲೆಯ ಚಿಂಚೋಳಿ‌ ತಾಲೂಕಿನಲ್ಲಿ ಜೆಡಿಎಸ್ ‌ಕಾರ್ಯಕರ್ತರು‌‌‌ ವಿವಿಧ ಬೇಡಿಕೆಯ ‌ಈಡೇರಿಕೆಗಾಗಿ ಆಗ್ರಹಿಸಿ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.

Advertisement

ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರಕಾರಗಳು ಕಳೆದ 20 ದಿನಗಳಿಂದ ನಿರಂತರವಾಗಿ  ಪೆಟ್ರೋಲ್, ಡೀಸೆಲ್‌, ಅಡುಗೆಯ ಅನಿಲ ಸಿ.ಎನ್.ಜಿ ಇನ್ನಿತರ ಅಗತ್ಯ ವಸ್ತುಗಳನ್ನು ಬೆಲೆ ಏರಿಕೆ ಮಾಡುತ್ತಿರುವುದು ಜನವಿರೋಧಿಯಾಗಿದೆಎಂದು ಜೆಡಿಎಸ್ ಮುಖಂಡ ಸಂಜೀವನ ಯಾಕಾಪುರ ಅಪಾದಿಸಿದರು.

ಕೇಂದ್ರ ಹಾಗೂ ರಾಜ್ಯದ ಬಿಜೆಪಿ ಸರ್ಕಾರ ಪೆಟ್ರೊಲಿಯಂ ವಸ್ತುಗಳ ಮೇಲೆ ವಿಧಿಸುತ್ತಿರುವ ತೆರಿಗೆ 50% ಜನಸಾಮಾನ್ಯರಿಗೆ ಅನುಕೂಲ ಮಾಡಿಕೊಡಬೇಕು ಪೆಟ್ರೋಲ್ , ಡೀಸೆಲ್‌ ಬೆಲೆ ತಕ್ಷಣ ಇಳಿಸಬೇಕು. ಕಲ್ಯಾಣ ಕರ್ನಾಟಕ 6 ಜಿಲ್ಲೆಗಳ  ಸರ್ಕಾರಿ ಇಲಾಖೆ ಸಮಯ ಬೆಳಿಗ್ಗೆ 8 ಗಂಟೆಯಿಂದ ಪ್ರಾರಂಭಿಸಬೇಕು ಎಂದು ಜೆಡಿಎಸ್ ಕಾರ್ಯಕರ್ತರು ಆಗ್ರಹಿಸಿದರು.

ರವಿಶಂಕರ್ ರೆಡ್ಡಿ ಮುತ್ತಂಗಿ,ನಿಯಾಜ ಅಲಿ,ಹಣಮಂತ ಪೂಜಾರಿ, ರಾಜಕುಮಾರ, ಸನ್ನಿ,ಬಸವರಾಜ ಕಲ್ಲೂರ ಇನ್ನಿತರು ಇದ್ದರು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next