Advertisement

ಕಾರ್ಯಕರ್ತನ ಮೇಲೆ ಪಿಎಸ್ಐ ಹಲ್ಲೆ: ಪೊಲೀಸ್ ಠಾಣೆಯೆದುರು ಜೆಡಿಎಸ್ ಧರಣಿ

07:22 AM Oct 23, 2019 | Team Udayavani |

ಯಾದಗಿರಿ: ಕಾರ್ಯಕರ್ತನ ಮೇಲೆ ಹಲ್ಲೆ ಮಾಡಿದ ನಗರ ಠಾಣೆ ಪಿಎಸ್ಐ ಬಾಪುಗೌಡ ಅವರನ್ನು ಅಮಾನತು ಮಾಡಬೇಕೆಂದು ಆಗ್ರಹಿಸಿ ಜೆಡಿಎಸ್ ಕಾರ್ಯಕರ್ತರು ನಗರದ ಪೊಲೀಸ್ ಠಾಣೆಯ ಎದುರು ಪ್ರತಿಭಟನೆ ನಡೆಸುತ್ತಿರುವ ಪ್ರತಿಭಟನೆ ಎರಡನೆ ದಿನಕ್ಕೆ ಕಾಲಿಟ್ಟಿದೆ.

Advertisement

ನಿನ್ನೆ ಸಂಜೆ ಆರಂಭವಾದ ಪ್ರತಿಭಟನೆ ಮಧ್ಯರಾತ್ರಿ 2 ಗಂಟೆಯವರೆಗೆ ನಡೆದಿತ್ತು. ಪ್ರತಿಭಟನಾಕಾರರ ಜೊತೆ ಐಜಿಪಿ ನಡೆಸಿದ ಸಂಧಾನವೂ ವಿಫಲವಾಗಿದ್ದು, ಪಟ್ಟುಬಿಡದ ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ಮುಂದುವರಿಸಿದ್ದಾರೆ.

ಪೊಲೀಸ್ ನೋಟೀಸ್ ಗೂ ಡೋಂಟ್ ಕೇರ್

ಪ್ರತಿಭಟನೆ ನಡೆಸುತ್ತಿರುವ ಸ್ಥಳ ಪ್ರಮುಖ ವ್ಯಾಪಾರಿ ಸ್ಥಳವಾದ್ದರಿಂದ ಸಂಚಾರ ವ್ಯವಸ್ಥೆಗೆ ತೊಂದರೆಯಾಗುವ ಕಾರಣಕ್ಕೆ ಪ್ರತಿಭಟನೆಯ ಜಾಗ ಬದಲಿಸುವಂತೆ ಪೊಲೀಸರು ನೋಟೀಸ್ ನಿಡಿದ್ದರು. ಆದರೆ ಪೊಲೀಸ್ ನೋಟೀಸ್ ಗೂ ಜಗ್ಗದ ಪ್ರತಿಭಟನಾಕಾರರು ತಮ್ಮ ಧರಣಿ ಮುಂದುವರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next