Advertisement

ʼಕೈʼ ಪರ ಪ್ರಚಾರ: ಹೊರಬಂದಿರುವ ವಿಡಿಯೋಗಳು ನನ್ನದೆ, ನನ್ನ ಹೇಳಿಕೆಗೆ ಬದ್ಧನೆಂದ ಭೋಜೇಗೌಡ

02:45 PM May 01, 2023 | Team Udayavani |

ಚಿಕ್ಕಮಗಳೂರು : ಡೀಲ್ ಮಾಡುವ ಶಕ್ತಿ ಇರೋದೆ ಸಿ.ಟಿ.ರವಿಗೆ. ಭೋಜೇಗೌಡನನ್ನ ಖರೀದಿ ಮಾಡುವ ಶಕ್ತಿ ಯಾರಿಗೂ ಇಲ್ಲ ಸಿ.ಟಿ.ರವಿಗೂ ಇಲ್ಲ, ಅವರು ಮನಸ್ಸು ಮಾಡಿದರೆ ಆಗಬಹುದು ಎಂದು ಜೆಡಿಎಸ್ ಎಂಎಲ್ ಸಿ ಎಸ್.ಎಲ್.ಭೋಜೇಗೌಡ ಹೇಳಿದರು.

Advertisement

ನಗರದಲ್ಲಿ ಮಾತನಾಡಿದ ಅವರು, ಭೋಜೇಗೌಡ ಡೀಲ್ ಆಗಿದ್ದಾರೆ ಎಂಬ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು,ಹೊರಬಂದಿರುವ ವಿಡಿಯೋಗಳು ನನ್ನದೆ, ನನ್ನ ಹೇಳಿಕೆಗೆ ನಾನು‌ ಬದ್ಧ. ನಾನೇ ಭೋಜೇಗೌಡ, ಅದು ನನ್ನ ಹೇಳಿಕೆ, ಅದಕ್ಕೆ ನನ್ನ ಪಕ್ಷ ನನಗೆ ನೋಟೀಸ್ ಕೂಡ ನೀಡಿದೆ ಎಲೆಕ್ಷನ್ ಮುಗಿದ ಮೇಲೆ ಪಕ್ಷದ ನೋಟೀಸ್ ಗೆ ಉತ್ತರಿಸುತ್ತೇನೆ.ಪಕ್ಷಕ್ಕೂ, ವರಿಷ್ಠರಿಗೂ ನಮ್ಮ ನಡೆಗೂ ಸಂಬಂಧವಿಲ್ಲ ಇದು ತಾಲೂಕು ಜೆಡಿಎಸ್ ಕಾರ್ಯಕರ್ತರು, ಮುಖಂಡರ ತೀರ್ಮಾನ ಎಂದರು.‌

ಇದನ್ನೂ ಓದಿ: ಜೆಡಿಎಸ್ ನದ್ದು ಅಧಿಕೃತ ಹೊಂದಾಣಿಕೆಯೋ, ರಾಜಕೀಯ ವ್ಯಭಿಚಾರವೋ: ಸಿಟಿ ರವಿ

ಬಿಜೆಪಿಗೂ-ಎಸ್.ಡಿ.ಪಿ.ಐ. ಗೂ ಏನು ಸಂಬಂಧ…? ಎಸ್.ಡಿ.ಪಿ.ಐ.ನಾಡಿನಲ್ಲಿ ಕೋಮುವಾದ ಹುಟ್ಟುಹಾಕುವ ಸಂಘಟನೆ. ಎಸ್.ಡಿ.ಪಿ.ಈ. ಜೊತೆ ವ್ಯಭಿಚಾರ ಮಾಡಿಕೊಂಡಿದ್ದು ಬಿಜೆಪಿಯವರು ನಿಮ್ಮ ಕೈನಲ್ಲಿ ಎಸ್.ಡಿ.ಪಿ.ಐ. ಬ್ಯಾನ್ ಮಾಡಲು ಆಗಲ್ವಾ. ಬ್ಯಾನ್ ಮಾಡಲು ರಾಷ್ಟ್ರಮಟ್ಟದಲ್ಲಿ ಏಕೆ ತೀರ್ಮಾನ ಮಾಡಿಲ್ಲ. ನಿಮಗೆ ತಾಕತ್ತಿದ್ದರೆ ಎಸ್.ಡಿ.ಪಿ.ಐ. ಬ್ಯಾನ್ ಮಾಡಿ ಮತ ವಿಭಜನೆಗೆ ಎಸ್.ಡಿ.ಪಿ.ಐ.ಗೆ ಪ್ರೋತ್ಸಾಹ ನೀಡಿ, ಕೊಟ್ಯಾಂತರ ಹಣ ನೀಡಿದ್ದು ಯಾರು. ಬಿಜೆಪಿಯವರು ಎಸ್.ಡಿ.ಪಿ.ಐ. ಜೊತೆ ರಾಜಕೀಯ ವ್ಯಭಿಚಾರ ಮಾಡಿ ಆಗಿದೆ. ವ್ಯಭಿಚಾರದ ಬಗ್ಗೆ ಮಾತನಾಡುವ ನೈತಿಕತೆಯನ್ನು ಸಿ.ಟಿ.ರವಿ, ಬಿಜೆಪಿಯವರು ಕಳೆದುಕೊಂಡಿದ್ದಾರೆ. ತಾಕತ್ತಿದ್ದರೆ, ಎಸ್.ಡಿ.ಪಿ.ಐ. ಬ್ಯಾನ್ ಮಾಡಿ ಬನ್ನಿ, ಆಗ ನಿಮ್ಮನ್ನು ಒಪ್ಪುತ್ತೇನೆ. ನಿಮಗೆ ಎಸ್.ಡಿ.ಪಿ.ಐ. ಬೇಕೇಬೇಕು, ಬ್ಯಾನ್ ಮಾಡುವ ತಾಕತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next