Advertisement

HDKಗೆ ಕೈಕೊಟ್ಟು ಮುಂಬಯಿಗೆ ಹಾರಿದ ಶಾಸಕ ನಾರಾಯಣ ಗೌಡ? ಶ್ರೀರಾಮುಲು

09:48 AM Feb 07, 2019 | Team Udayavani |

ಬೆಂಗಳೂರು : ಜೆಡಿಎಸ್‌ ಶಾಸಕ ನಾರಾಯಣಗೌಡ ಅವರು ಸಿಎಂ ಕುಮಾರಸ್ವಾಮಿಗೆ ಕೈಕೊಟ್ಟು ಮುಂಬಯಿಗೆ ಹಾರಿದ್ದಾರೆಯೇ ?

Advertisement

ಈ ರೀತಿಯ ಬಾಂಬನ್ನು ಬಿಜೆಪಿ ಶಾಸಕ ಶ್ರೀರಾಮುಲು ಸಿಡಿಸಿದ್ದಾರೆ. ಶ್ರೀರಾಮುಲು ಹೇಳುವ ಪ್ರಕಾರ ನಾವು ಆಪರೇಶನ್‌ ಕಮಲ ಮಾಡಲ್ಲ; ಅವರವರೇ ಆಪರೇಶನ್‌ ಮಾಡಿಕೊಳ್ಳುತ್ತಾರೆ !

ವಿಧಾನಸೌಧದಲ್ಲಿಂದು ಮಾತನಾಡಿದ ಶ್ರೀರಾಮುಲು, ನಾವು ಆಪರೇಶನ್‌ ಕಮಲ ಮಾಡ್ತಾ ಇದ್ದೀವಿ ಅಂತ ಆಡಳಿತ ಪಕ್ಷದ ನಾಯಕರು ಕೂಗೆಬ್ಬಿಸುತ್ತಿದ್ದಾರೆ. ಆದರೆ ನಾವಂತೂ ಆಪರೇಶನ್‌ ಕಮಲ ಮಾಡ್ತಿಲ್ಲ; ಅವರವರೇ ಆಪರೇಶನ್‌ ಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳಿದರು. 

ಮುಂದುವರಿದು ಮಾತನಾಡಿದ ಶ್ರೀರಾಮುಲು, ಇನ್ನಷ್ಟು ಕಾಂಗ್ರೆಸ್‌ ಶಾಸಕರು ಪಕ್ಷ ತೊರೆದು ಹೊರ ಬರುವ ಸಾಧ್ಯತೆ ಇದೆ; ಆಡಳಿತ ಪಕ್ಷದ ಶಾಸಕರೇ ತಮ್ಮ ಸರಕಾರದ ವಿರುದ್ಧ ಬಹಿರಂಗ ಹೇಳಿಕೆ ನೀಡುತ್ತಿದ್ದಾರೆ ಎಂದರು.

ಕುಮಾರ ಸ್ವಾಮಿ ನೇತೃತ್ವದ ದೋಸ್ತಿ ಸರಕಾರದಲ್ಲೀಗ ಸಂಖ್ಯಾಬಲದ ಕೊರತೆ ಇದೆ; ವಿಪ್‌ ಜಾರಿ ಮಾಡಿದರೂ ಈ ಸ್ಥಿತಿ ಒದಗಿದೆ. ಆದುದರಿಂದ ಕುಮಾರಸ್ವಾಮಿ ರಾಜೀನಾಮೆ ನೀಡಬೇಕು ಎಂದು ಶ್ರೀರಾಮುಲು ನೇರ ಮಾತು ನುಡಿದರು. 

Advertisement

ಕಾಂಗ್ರೆಸ್‌ – ಜೆಡಿಎಸ್‌ ನಾಯಕರು ತಮ್ಮ ಶಾಸಕರನ್ನು ಅಂಕೆಯಲ್ಲಿಟ್ಟುಕೊಳ್ಳಲು ವಿಫ‌ಲರಾಗಿದ್ದಾರೆ. ಅವರನ್ನು ನಾವು ಕೂಡಿ ಹಾಕಿದ್ದೇವೆ ಎಂದು ನಮ್ಮ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಶ್ರೀರಾಮುಲು ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next