Advertisement

ಜೆಡಿಎಸ್‌ಗೆ ಹೋಗಲ್ಲ: ಸತೀಶ್‌ ಜಾರಕಿಹೊಳಿ

03:45 AM Jan 28, 2017 | Team Udayavani |

ಮೈಸೂರು: ಸಿಎಂ ಸಿದ್ದರಾಮಯ್ಯ ಹಾಗೂ ನನ್ನ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಮಂತ್ರಿ ಸ್ಥಾನ ಬೇಡವೆಂದು ತಾನಾಗಿಯೇ ಹೇಳಿರುವುದಾಗಿ ಮಾಜಿ ಸಚಿವ ಸತೀಶ್‌ ಜಾರಕಿಹೊಳಿ ತಿಳಿಸಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ಅಧಿಕಾರದ ಆಸೆ, ಆಕಾಂಕ್ಷೆ ಇಲ್ಲ. ಸಮಾಜ ಸೇವೆ, ಪಕ್ಷದ ಕೆಲಸ ಮಾಡಲು ಮಂತ್ರಿಮಂಡಲದಿಂದ ಬಿಡುಗಡೆ ಮಾಡುವಂತೆ ನಾನೇ  ಮುಖ್ಯಮಂತ್ರಿಯವರಿಗೆ ಮನವಿ ಮಾಡಿದ್ದೆ. ಅದರಂತೆ ಕೈಬಿಟ್ಟರು. ಮತ್ತೆ ಸಂಪುಟ ಸೇರುವ ಆಸೆ ಇದ್ದಿದ್ದರೆ ಏಳೂವರೆ ತಿಂಗಳ ಹಿಂದೆಯೇ ಪ್ರಯತ್ನಿಸುತ್ತಿದ್ದೆ ಎಂದರು.

ಜೆೆಡಿಎಸ್‌ನ ಹಲವು ನಾಯಕರ ಜೊತೆಗೆ ಒಡನಾಟವಿದೆ. ಹಾಗೆಂದ ಮಾತ್ರಕ್ಕೆ ಜೆಡಿಎಸ್‌ಗೆ ಹೋಗುವ ಪ್ರಶ್ನೆಯೇ ಇಲ್ಲ. ಸಿದ್ದರಾಮಯ್ಯ ಹಾಗೂ ಡಾ.ಜಿ.ಪರಮೇಶ್ವರ್‌ ನಾಯಕತ್ವದಲ್ಲೇ ಮುಂದಿನ ಚುನಾವಣೆ ಎದುರಿಸುವುದಾಗಿ ತಿಳಿಸಿದರು. ಸಚಿವ ರಮೇಶ್‌ ಜಾರಕಿಹೊಳಿ ಅವರನ್ನು ಮಂತ್ರಿ ಮಂಡಲದಲ್ಲಿ ಉಳಿಸಿಕೊಳ್ಳುವುದು, ಬಿಡುವುದು ಮುಖ್ಯಮಂತ್ರಿ ಹಾಗೂ ಪಕ್ಷದ ಅಧ್ಯಕ್ಷರಿಗೆ ಬಿಟ್ಟ ವಿಚಾರ  ಎಂದರು.

Advertisement

Udayavani is now on Telegram. Click here to join our channel and stay updated with the latest news.

Next