Advertisement

ಮಂಡ್ಯ: ಜೆಡಿಎಸ್‌ ಅಭ್ಯರ್ಥಿ ರಾಮು ಪರ ಮತಯಾಚನೆ

04:08 PM Jun 07, 2022 | Team Udayavani |

ಮಂಡ್ಯ: ನಗರದ ವಿವಿಧೆಡೆ ವಿಧಾನ ಪರಿಷತ್‌ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ನೇತೃತ್ವದಲ್ಲಿ ಪದವೀಧರ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಎಚ್‌.ಕೆ.ರಾಮು ಅವರ ಪರವಾಗಿ ಮತಯಾಚಿಸಿದರು.

Advertisement

ನಂತರ ಮಾತನಾಡಿದ ಅವರು, ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿ ರಾಮು ಅವರನ್ನು ಗೆಲ್ಲಿಸಬೇಕು. ಏಕೆಂದರೆ ಈಗಾಗಲೇ ನೌಕರರ ಪರವಾಗಿ ಹಲವು ಹೋರಾಟ ಮಾಡಿದ್ದಾರೆ. ದೇವೇಗೌಡ ಮತ್ತು ಕುಮಾರಸ್ವಾಮಿ ಅವರು ನೌಕರರ ಪರವಾಗಿ ಅಪಾರ ಗೌರವ ಇಟ್ಟುಕೊಂಡಿದ್ದಾರೆ. ಹಾಗಾಗಿ ಅವರನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

ಜೆಡಿಎಸ್‌ ಅಭ್ಯರ್ಥಿಯಾದ ಎಚ್‌.ಕೆ.ರಾಮು ಅವರನ್ನು ಮತದಾರರು ಪರಿಗಣಿಸಬೇಕು. ದಯಮಾಡಿ ಅವರಿಗೆ ಮೊದಲ ಪ್ರಾಶಸ್ತ್ಯದ ಮತ ನೀಡಬೇಕು. ಈಗಾಗಲೇ ಸುಭಾಷ್‌ ನಗರ, ವಿದ್ಯಾನಗರ, ಗಾಂಧಿ  ನಗರ ಸೇರಿದಂತೆ ಇತರೆ ಸ್ಥಳಗಳಲ್ಲಿ ಮತದಾರರನ್ನು ಭೇಟಿ ಮಾಡಿ ಉತ್ತಮವಾಗಿ ಪ್ರಚಾರ ಮಾಡಲಾಗುತ್ತಿದೆ. ಮತ್ತಷ್ಟು ಪ್ರಚಾರದಲ್ಲಿ ತೊಡಗುವ ಮೂಲಕ ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರುವುದು ಕಾರ್ಯಕರ್ತರು, ಮುಖಂಡರ ಮೇಲಿದೆ. ಹಾಗಾಗಿ ಕೆಲಸ ಮಾಡೋಣ ಎಂದು ಸಲಹೆ ನೀಡಿದರು.

ಇದೇ ವೇಳೆ ಮುಖಂಡರಾದ ಉಮೇಶ್‌ ಪಟೇಲ್‌, ಕುಮಾರ್‌, ಲೋಕೇಶ್‌, ಕಾರ್ಯಕರ್ತರು, ಮುಖಂಡರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next