Advertisement

“ಅತೃಪ್ತ ಹಾಗೂ ಅನರ್ಹ ಸರ್ಕಾರ: ರಾಜ್ಯ ಸರಕಾರವನ್ನು ಟೀಕಿಸಿ ಜೆಡಿಎಸ್ ಕಾಂಗ್ರೆಸ್ ಟ್ವೀಟ್

09:43 AM Aug 28, 2019 | keerthan |

ಬೆಂಗಳೂರು: ಬಿ ಎಸ್ ಯಡಿಯೂರಪ್ಪ ನೇತೃತ್ವದ ರಾಜ್ಯ ಸರಕಾರದಲ್ಲಿ ಸಂಪುಟ ವಿಸ್ತರಣೆ ನಂತರ ಎದ್ದಿರುವ ಅಸಮಾಧಾನ ವಿಚಾರದಲ್ಲಿ ಕರ್ನಾಟಕ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಟ್ವೀಟ್ ಮಾಡಿದ್ದು, ರಾಜ್ಯ ಸರಕಾರವನ್ನು ಟೀಕೆ ಮಾಡಿದೆ.

Advertisement

ಮೀಸೆ ಮಣ್ಣಾಗಿಸಿಕೊಂಡು ಸೋತವರು ನಗುನಗುತ ಬೀಗುತಿಹರು.. ಎದೆಯೊಡ್ಡಿ ಜಯಿಸಿದವರು ತಲೆ ತಗ್ಗಿಸಿ ಕೈ ಚಾಚುತಿಹರು.. ಹಾರುತಿಹ ನ್ಯಾಯ ಧ್ವಜವನ್ ಇಳಿಸಿ ಮುನ್ನಡೆಯಲು. ಎಲ್ಲಿಹುದು ನ್ಯಾಯ ಮರ್ಯಾದಾ ಪುರುಷೋತ್ತಮನ ಆಳ್ವಿಕೆಯೊಳ್? – ಇದು ಜೆಡಿಎಸ್‌ ಮಾಡಿರುವ ಟ್ವೀಟ್.‌ ಚುನಾವಣೆಯಲ್ಲಿ ಸೋತ ಲಕ್ಷ್ಮಣ ಸವದಿಗೆ ಉಪಮುಖ್ಯಮಂತ್ರಿ ಪಟ್ಟ ಕಟ್ಟಿದ ಬಿಜೆಪಿಯನ್ನು ಟೀಕಿಸಿ ಜೆಡಿಎಸ್‌ ಹೀಗೆ ಟ್ವೀಟ್‌ ಮಾಡಿದೆ.

 

ಸರಿಯಾದ ಖಾತೆ ಹಂಚಿಕೆ ಆಗಿಲ್ಲ ಎಂದು ಹಲವು ಬಿಜೆಪಿ ಮಂತ್ರಿಗಳು ಅಸಮಾಧಾನ ಹೊಂದಿದ್ದಾರೆ ಎಂಬ ಅರ್ಥದಲ್ಲಿ ಕಾಂಗ್ರೆಸ್ ಸರಣಿ ಟ್ವೀಟ್ ಮಾಡಿದೆ.

Advertisement

 

 

 

 

Advertisement

Udayavani is now on Telegram. Click here to join our channel and stay updated with the latest news.

Next