Advertisement

ಜಯಮಾಲಾ ಗ್ಲಾಮರಸ್‌ ಸಚಿವೆ: ಪ್ರಮೋದ್‌ 

11:16 AM Aug 30, 2018 | Team Udayavani |

ಉಡುಪಿ: ಜಯಮಾಲಾ ನಮ್ಮ ಗ್ಲಾಮರೆಸ್‌ ಉಸ್ತುವಾರಿ ಸಚಿವರು, ಅವರ ಗ್ಲಾಮರ್‌ ನಮಗೂ ಇಲ್ಲ ಎಂದು ಮಾಜಿ ಸಚಿವ ಪ್ರಮೋದ್‌ ಮಧ್ವರಾಜ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಜಯಮಾಲಾ 1 ದಿನ ಮಾತ್ರ ನಗರ ಸಂಸ್ಥೆಗಳ ಚುನಾವಣೆ ಪ್ರಚಾರಕ್ಕೆ ಬಂದಿರುವುದು ನಿಮಗೆ ಸಾಕಾ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಮಾಜಿ ಸಚಿವ, ಅವರ 1 ದಿನದ ಪ್ರಚಾರವೇ ದೊಡ್ಡ ಪ್ರಭಾವವನ್ನೇ ಸೃಷ್ಟಿಸಿದೆ. ಉಡುಪಿಯಲ್ಲಿ ಜಯಮಾಲಾ ಗಾಳಿ ಎಬ್ಬಿಸಿದ್ದಾರೆ ಎಂದರು.

Advertisement

ಕಾಂಗ್ರೆಸ್‌ ಸನಾತನ ಧರ್ಮದಂತೆ!
ಕಾಂಗ್ರೆಸ್‌ಗೆ ಇದು ಅಳಿವು ಉಳಿವಿನ ಚುನಾವಣೆ ಎಂದು ಹೇಳಲಾಗುತ್ತಿದೆ ಎಂದು ಪತ್ರಕರ್ತರು ಪ್ರಶ್ನಿಸಿದಾಗ, ಕಾಂಗ್ರೆಸ್‌ ಪಕ್ಷ ಎಂದಿಗೂ ಉಳಿಯುತ್ತದೆ. ಸನಾತನ ಧರ್ಮದಂತೆ ಕಾಂಗ್ರೆಸ್‌ ಪಕ್ಷ. ಸನಾತನ ಧರ್ಮ ಎಂದಿಗೂ ನಾಶವಾಗುವುದಿಲ್ಲ. ನಾನು ಬಿಟ್ಟರೂ ಕಾಂಗ್ರೆಸ್‌ ಮುಕ್ತ ಮಾಡಲು ಸಾಧ್ಯವಿಲ್ಲ ಎಂದರು.

ಪತ್ರಕರ್ತರೊಬ್ಬರು ನಾನು ಇಲ್ಲದಿದ್ದರೂ ಅಂದರೆ ಏನು ಅರ್ಥ? ವಿಧಾನಸಭಾ ಚುನಾವಣೆಯಂತೆ ಗೇಟು ತೆರೆಯುವುದು ಮತ್ತು ಹಾರುವುದು ಎಂಬೆಲ್ಲಾರೀತಿಯಲ್ಲಿ ಪ್ರಚಾರವಾಗಿದೆ. ಮುಂದಿನ ಲೋಕಸಭಾ ಚುನಾವಣೆಯೊಳಗೆ ಪಕ್ಷ ಬಿಡುವ ಆಲೋಚನೆ ಇದೆಯಾ ಎಂದು ಪ್ರಶ್ನಿಸಿದರು. ಇದು ಉದಾಹರಣೆಗೆಂದು ನೀಡಿದ ಉತ್ತರ. ತುಂಬಾ ಹಳೆಯ ಪಕ್ಷವಾಗಿರುವ ಕಾಂಗ್ರೆಸ್‌ಗೆ ಎಂದಿಗೂ ಅಳಿವಿಲ್ಲ ಉಳಿವು ಮಾತ್ರ ಎಂದರು.

ಶಾಸಕ ಭಟ್‌ ವಿರುದ್ಧ ಪ್ರತಿಭಟನೆ
ನಾನು ಗೆದ್ದ ಒಂದು ತಿಂಗಳೊಳಗೆ ಮರಳು ಸಮಸ್ಯೆ ಬಗೆಹರಿಸುತ್ತೇನೆ ಎಂದು ಶಾಸಕ ಭಟ್‌ ಹೇಳಿದ್ದರು. ಆದರೆ ಆ. 1ರಿಂದ ಮರಳುಗಾರಿಕೆ ಆರಂಭಗೊಳ್ಳಬೇಕಿತ್ತು. ಅವರಿಗೆ ಇನ್ನೂ ಒಂದು ತಿಂಗಳು ಗಡುವು ನೀಡಿ, ಸೆ. 1ರ ಅನಂತರ ಮರಳುಗಾರಿಕೆ ಆರಂಭಗೊಳ್ಳದಿದ್ದರೆ ಪ್ರತಿಭಟನೆ ನಡೆಸುತ್ತೇವೆ. ಇನ್ನೂ ಮಹತ್ವದ ವಿಚಾರವೆಂದರೆ, ಸಿಆರ್‌ಝಡ್‌ ಮತ್ತು ನಾನ್‌ ಸಿಆರ್‌ಝಡ್‌ ಎರಡು ಕಡೆ ಕೇಂದ್ರ ಸರಕಾರ ಮರಳುಗಾರಿಕೆಗೆ ಅವಕಾಶ ನಿರಾಕರಿಸಿದೆ. ಇಲ್ಲಿನ ಶಾಸಕರು ಕೇಂದ್ರದಲ್ಲಿ ಈ ಕುರಿತು ಚರ್ಚಿಸಿದರೆ ಮರಳುಗಾರಿಕೆ ಪುನರಾರಂಭಿಸಲು ಸಾಧ್ಯ. ಇದಕ್ಕೆ ರಾಜ್ಯ ಏನೂ ಮಾಡಲು ಸಾಧ್ಯವಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next