Advertisement

ಜಯಮಾಲಾಗೆ ಸಚಿವ ಸ್ಥಾನ ಕೊಟ್ಟಿದ್ದಕ್ಕೆ ಹೊಟ್ಟೆಕಿಚ್ಚಿಲ್ಲ

06:50 AM Jun 19, 2018 | Team Udayavani |

ಬೆಂಗಳೂರು: “ಜಯಮಾಲಾ ಅವರ ಬಗ್ಗೆ ಹೊಟ್ಟೆಕಿಚ್ಚಿನಿಂದ ಯಾವುದೇ ಮಾತನಾಡಿಲ್ಲ’ ಎಂದು ಶಾಸಕಿ ಲಕ್ಷ್ಮೀ ಹೆಬ್ಟಾಳ್ಕರ್‌ ಹೇಳಿದ್ದಾರೆ.

Advertisement

ವಿಧಾನಸೌಧದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಹೊಟ್ಟೆಕಿಚ್ಚಿಗೆ ಮದ್ದಿಲ್ಲ ಎನ್ನುವುದು ಇಡೀ ಜಗತ್ತಿಗೆ ಗೊತ್ತಿದೆ. ನಮ್ಮ ಕಡೆ “ಸೇವೆ’ ಎಂಬ ಪದವನ್ನು ವಿಶಾಲ ಅರ್ಥದಲ್ಲಿ ಬಳಕೆ ಮಾಡುತ್ತಾರೆ. ದೇವರ ಸೇವೆ, ಅಭಿಷೇಕ ಸೇವೆ ಮಾಡುವುದು ಎನ್ನುವ ರೀತಿಯಲ್ಲಿ ಪಕ್ಷಕ್ಕೆ ಅವರು ಮಾಡಿರುವ ಸೇವೆ ನಾಯಕರಿಗೆ ಇಷ್ಟವಾಗಿರಬಹುದು ಎಂಬರ್ಥದಲ್ಲಿ ಹೇಳಿದ್ದೇನೆ.

ಹೊಟ್ಟೆಕಿಚ್ಚಿನಿಂದ ಯಾವ ಮಾತೂ ಆಡಿಲ್ಲ ಎಂದು ಸ್ಪಷ್ಟಪಡಿಸಿದರು. ನಾನು ವಾಸ್ತವದಲ್ಲಿ ಬದುಕುವವಳು.
ಎರಡನೇ ಹಂತದಲ್ಲಿ ಸಚಿವ ಸ್ಥಾನ ಕೊಡುವುದು, ಬಿಡುವುದು ಹೈಕಮಾಂಡ್‌ಗೆ ಬಿಟ್ಟ ವಿಚಾರ. ಅದಕ್ಕಾಗಿ
ಯಾವುದೇ ಲಾಬಿ ಮಾಡುವುದಿಲ್ಲ. ಪಕ್ಷ ಸಂಘಟನೆ ಮಾಡುತ್ತೇನೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next