Advertisement

ಸಾಂಗ್ಲಿ: ಜಯ ಸಿ.ಸುವರ್ಣರಿಗೆ ಸುವರ್ಣ ಕೀರ್ತಿ ಬಿರುದು

04:49 PM Jun 05, 2017 | |

ಸಾಂಗ್ಲಿ: ಬಿಲ್ಲವರ ಅಸೋಸಿಯೇಶನ್‌ ಸಾಂಗ್ಲಿ ಇದರ ಉದ್ಘಾಟನ ಸಮಾರಂಭ ಹಾಗೂ ನೂತನ ಕಾರ್ಯಾಲಯದ ಲೋಕಾರ್ಪಣೆ ಸಮಾರಂಭವು ಮೇ 28 ರಂದು ಸಂಜೆ ಸ್ಥಳೀಯ ಮಾಧವ ನಗರದ ಡೆಕ್ಕನ್‌ ಮ್ಯಾನುಫ್ಯಾಕ್ಚರರ್ ಅಸೋಸಿಯೇಶನ್‌ನ ಲಕ್ಷ್ಮಣರಾವ್‌ ಕಿರ್ಲೋಸ್ಕರ್‌ ಸಭಾಗೃಹದಲ್ಲಿ  ನಡೆಯಿತು.

Advertisement

ಸಮಾರಂಭದಲ್ಲಿ ಸಂಸ್ಥೆಯ ಪದಾಧಿಕಾರಿಗಳು ಭಾರತ್‌ ಬ್ಯಾಂಕಿನ ಕಾರ್ಯಾಧ್ಯಕ್ಷ ಜಯ ಸಿ. ಸುವರ್ಣ ಅವರಿಗೆ “ಸುವರ್ಣ ಕೀರ್ತಿ’ ಬಿರುದು ಪ್ರದಾನಿಸಿ ಶಾಲು ಹೊದೆಸಿ, ಫಲಪುಷ್ಪ, ಸ್ಮರಣಿಕೆ, ಸಮ್ಮಾನ ಪತ್ರವನ್ನಿತ್ತು ಗೌರವಿಸಿದರು. ಅಲ್ಲದೆ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಶ್ರೀಧರ ಪೂಜಾರಿ ಕಾರ್ಕಳ ಅವರನ್ನು ಗಣ್ಯರ ಸಮ್ಮುಖದಲ್ಲಿ ಸಮ್ಮಾನಿಸಲಾಯಿತು.

ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಉಮಾನಾಥ ಕೋಟ್ಯಾನ್‌, ಲೋನವಾಲ ನಗರ ಪರಿಷತ್‌ನ ಉಪಾಧ್ಯಕ್ಷ ನಿಟ್ಟೆ ನಡಿಮನೆ ಶ್ರೀಧರ್‌ ಎಸ್‌. ಪೂಜಾರಿ ಮುಖ್ಯ ಅತಿಥಿಯಾಗಿ ಹಾಗೂ  ಭಾರತ್‌ ಬ್ಯಾಂಕಿನ ನಿರ್ದೇಶಕ ನ್ಯಾಯವಾದಿ ಎಸ್‌. ಬಿ. ಅಮೀನ್‌, ಮುಂಬಯಿಯ ಲೆಕ್ಕ ಪರಿಶೋಧಕ ಸಿಎ ಅಶ್ವಜಿತ್‌ ಹೆಜ್ಮಾಡಿ, ಬಿಲ್ಲವರ ಅಸೋಸಿಯೇಶನ್‌ ಮುಂಬಯಿ ಇದರ ಮಾಜಿ ಗೌರವ ಕೋಶಾಧಿಕಾರಿ ಎನ್‌. ಎಂ. ಸನೀಲ್‌, ಕಲ್ವಾದ ಹೊಟೇಲ್‌ ಉದ್ಯಮಿ ಹರೀಶ್‌ ಡಿ. ಸಾಲ್ಯಾನ್‌, ಕಲ್ವಾ ಸ್ಥಳೀಯ ಕಚೆೇರಿಯ ಕಾರ್ಯಾಧ್ಯಕ್ಷ ನಾರಾಯಣ ಸುವರ್ಣ, ಗಣ್ಯರಾದ ಲ| ದಿವಾಕರ್‌ ಶೆಟ್ಟಿ, ಗಣೇಶ್‌ ರೈ, ರಮೇಶ್‌ ಶೆಟ್ಟಿ ಸಾಂಗ್ಲಿ, ತಾರಾನಾಥ ಶೆಟ್ಟಿ,  ಸುರೇಶ್‌ ರೈ, ನ್ಯಾಯವಾದಿ ರಾಜೇಂದ್ರ ಶ್ಯಾನ್‌ಭಾಗ್‌, ಸೀತಾರಾಮ ಭಟ್‌, ಕೇಶವ ರಾವ್‌ ಮೂಲ್ಕಿ, ಶಂಭು ಆನಂದ ಪೂಜಾರಿ, ಸತೀಶ್‌ ಮೂಲ್ಯ, ಸುನೀಲ್‌ ಪೂಜಾರಿ ಬೆಳಗಾವಿ, ಡಾ| ಈಶ್ವರ ಅಲೆವೂರು, ಜ್ಯೋತಿ ಕೆ. ಸುವರ್ಣ, ಜಗನ್ನಾಥ್‌ ಎಂ. ಅಮೀನ್‌ ಉಪ್ಪಳ, ಉಮೇಶ್‌ ಪೂಜಾರಿ ಕಲ್ವಾ, ಕೃಷ್ಣಪ್ಪ ಪೂಜಾರಿ, ಶ್ರೀ ಭಾÅಮರಿ ಯಕ್ಷನೃತ್ಯ ಕಲಾ ನಿಲಯದ ಕಟೀಲು ಸದಾನಂದ ಶೆಟ್ಟಿ, ಶಂಭು ಮೂಲ್ಯ, ದೇಜು ಪೂಜಾರಿ, ಜಯಲಕ್ಷ್ಮೀ ಚಂದ್ರಶೇಖರ್‌, ಆನಂದ ಪೂಜಾರಿ, ಸುಶೀಲಾ ವಿ. ಪೂಜಾರಿ ಭಾಂಡೂಪ್‌, ಜಯಂತಿ ಶಿವರಾಮ ಕೋಟ್ಯಾನ್‌, ಪ್ರೇಮಾ ಆರ್‌. ಕೋಟ್ಯಾನ್‌ ಸಾಂತಾಕ್ರೂಜ್‌ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

ಉಪಾಧ್ಯಕ್ಷ ಸುಧಾಕರ ಪೂಜಾರಿ, ಕು| ರಮಿತಾ ಪೂಜಾರಿ, ಕು| ಸೌಂದರ್ಯ ಪೂಜಾರಿ, ಮಹಿಳಾ ವಿಭಾಗಧ್ಯಕ್ಷೆ ಶಕುಂತಲಾ ಎಸ್‌. ಪೂಜಾರಿ, ಗೌರವ ಕೋಶಾಧಿಕಾರಿ ಧೀರಜ್‌ ಪೂಜಾರಿ, ಕಾರ್ಯಕಾರಿ ಸಮಿತಿಯ ಸದಸ್ಯರಾದ ರಘುರಾಮ ಪೂಜಾರಿ, ಪ್ರವೀಣ್‌ ಪೂಜಾರಿ, ಶೇಖರ್‌ ಪೂಜಾರಿ, ನಾರಾಯಣ ಎಸ್‌. ಪೂಜಾರಿ, ಆನಂದ ವಿ. ಪೂಜಾರಿ, ಗಣೇಶ್‌ ಪೂಜಾರಿ, ಮನೋಜ್‌ ಪೂಜಾರಿ, ಆನಂದ ಡಿ. ಪೂಜಾರಿ, ಚಂದ್ರಾಕ್ಷಿ ಪೂಜಾರಿ, ಅಕ್ಷಯ ಮಾಸಿಕದ ಸಹಾಯಕ ಸಂಪಾದಕ ಹರೀಶ್‌ ಕೆ. ಹೆಜ್ಮಾಡಿ, ಗೌರವ ಕಾರ್ಯದರ್ಶಿ ದೇವಿಕಿರಣ್‌ ಪೂಜಾರಿ ಮೊದಲಾದವರು ಸಹಕರಿಸಿದರು. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿದವು.

 ಚಿತ್ರ-ವರದಿ : ರೋನ್ಸ್‌ ಬಂಟ್ವಾಳ್‌

Advertisement
Advertisement

Udayavani is now on Telegram. Click here to join our channel and stay updated with the latest news.

Next