Advertisement

ದೇಶ ರಕ್ಷಕ ವ್ಯಕ್ತಿಯಿಂದ ಅರಾಜಕತೆ ಸೃಷ್ಟಿ : ಪ್ರಧಾನಿ ಮೋದಿಗೆ ಜಯಾ ಬಚ್ಚನ್‌ ಟಾಂಗ್‌

09:09 AM May 02, 2019 | Sathish malya |

ಹೊಸದಿಲ್ಲಿ : ‘ದೇಶ ರಕ್ಷಣೆಯ ಹೊಣೆ ಹೊತ್ತಿರುವ ವ್ಯಕ್ತಿ ತನ್ನ ಕರ್ತವ್ಯ ಮರೆತು ದೇಶದಲ್ಲಿ ಅರಾಜಕತೆ ಮತ್ತು ಕ್ಷೋಭೆ ಸೃಷ್ಟಿಸುತ್ತಿದ್ದಾರೆ’ ಎಂದು ಹೇಳುವ ಮೂಲಕ ಸಮಾಜವಾದಿ ಪಕ್ಷದ ನಾಯಕಿ ಮತ್ತು ರಾಜ್ಯಸಭಾ ಸದಸ್ಯೆಯಾಗಿರುವ ಜಯಾ ಬಚ್ಚನ್‌ ಅವರು ಪ್ರಧಾನಿ ಮೋದಿ ಅವರನ್ನು ಪರೋಕ್ಷವಾಗಿ ಟೀಕಿಸಿದ್ದಾರೆ.

Advertisement

ಜಯಾ ಬಚ್ಚನ್‌ ಅವರು ಎಸ್‌ಪಿ ಅಭ್ಯರ್ಥಿಯಾಗಿರುವ ಮಾಜಿ ನಟ ಶತ್ರುಘ್ನ ಸಿನ್ಹಾ ಅವರ ಪತ್ನಿ ಪೂನಂ ಸಿನ್ಹಾ ಪರ ಲಕ್ನೋದಲ್ಲಿ ಚುನಾವಣಾ ಪ್ರಚಾರ ಭಾಷಣ ಮಾಡುತ್ತಿದ್ದರು.

ಜನಸೇವೆಯ ಮಹದಾಸೆಯೊಂದಿಗೆ ಲೋಕಸಭಾ ಚುನಾವಣಾ ಕಣ ಪ್ರವೇಶಿಸಿರುವ ನವ ಅಭ್ಯರ್ಥಿ ಪೂನಂ ಸಿನ್ಹಾ ಅವರು ಮತದಾರರು ಸಂಪೂರ್ಣ ಬೆಂಬಲ ನೀಡಬೇಕು ಎಂದು ಹೇಳಿದರು.

ದೇಶದ ರಕ್ಷಣೆ ಹೊಣೆ ಹೊತ್ತ ವ್ಯಕ್ತಿ ಈ ಸಂದರ್ಭದಲ್ಲಿ ಅರಾಜಕತೆ ಮತ್ತು ಕ್ಷೋಭೆ ಸೃಷ್ಟಿಸುತ್ತಿದ್ದಾರೆ ಎಂದು ಆರೋಪಿಸಿದ ಜಯಾ ಬಚ್ಚನ್‌, ಬೂತ್‌ ಏಜಂಟರ ಜವಾಬ್ದಾರಿ ಅತೀ ಮುಖ್ಯ ಮತ್ತು ಅಗತ್ಯವಾದದ್ದು ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next