Advertisement

ಡಿಆರ್‌ಎಸ್‌ಗೆ ಮನವಿ: ಐಸಿಸಿ ನಿಯಮ ಉಲ್ಲಂಘಿಸಿದ ಧೋನಿ?

07:35 AM Dec 12, 2017 | Team Udayavani |

ನಾಗ್ಪುರ: ಭಾನುವಾರ ಭಾರತ ತಂಡ ಶ್ರೀಲಂಕಾ ವಿರುದ್ಧ ನಡೆದ ಏಕದಿನ ಪಂದ್ಯದಲ್ಲಿ ಹೀನಾಯವಾಗಿ ಸೋತಿದ್ದು ಈಗ ನೆನಪಿನ ಪುಟಗಳನ್ನು ಸೇರಿದೆ. ಆದರೆ ಈ ಪಂದ್ಯದಲ್ಲಿ ಧೋನಿ ಡಿಆರ್‌ಎಸ್‌ಗೆ ಮನವಿ ಮಾಡಿದ್ದು ಮಾತ್ರ ಹಲವು ಪ್ರಶ್ನೆಗಳಿಗೆ ಕಾರಣವಾಗಿದೆ. ಭಾರತ ಬ್ಯಾಟಿಂಗ್‌ ವೇಳೆ 33ನೇ ಓವರ್‌ನಲ್ಲಿ ಬುಮ್ರಾ ಎಲ್ಬಿಗೆ ಔಟಾಗಿದ್ದರು. ಆಗ ಮತ್ತೂಂದು ತುದಿಯಲ್ಲಿದ್ದ ಧೋನಿ ತೀರ್ಪು ಮರು ಪರಿಶೀಲನೆಗೆ ಮನವಿ ಮಾಡಿದರು. ಆ ವೇಳೆ ಬುಮ್ರಾ ಔಟಲ್ಲ ಎಂದು ತೀರ್ಪು ಬಂತು. ಇಲ್ಲಿನ ಪ್ರಶ್ನೆಯೆಂದರೆ ಡಿಆರ್‌ಎಸ್‌ಗೆ ಸಂಬಂಧಪಟ್ಟ ಬ್ಯಾಟ್ಸ್‌ಮನ್‌ ಮಾತ್ರ ಮನವಿ ಸಲ್ಲಿಸಬೇಕು, ನಾನ್‌ಸ್ಟ್ರೈಕ್‌ನಲ್ಲಿರುವ ಬ್ಯಾಟ್ಸ್‌ಮನ್‌ಗೆ ಈ ಅಧಿಕಾರವಿಲ್ಲ. ಆದ್ದರಿಂದ ಧೋನಿ ಐಸಿಸಿ ನಿಯಮ ಉಲ್ಲಂಘಿಸಿದ್ದಾರೆಂದು ಹೇಳಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next