Advertisement

ಜನುಮದ ಸ್ನೇಹಿತರು ರೆಡಿ

11:06 AM Dec 06, 2018 | |

ಇಂಡಿಯನ್‌ ಫಿಲಂ ಇಂಡಸ್ಟ್ರಿಸ್‌ ಲಾಂಛನದಲ್ಲಿ ಶೈಕ್‌ ಮುಕ್ತಿಯಾರ್‌ ಕಥೆ ಬರೆದು ನಿರ್ಮಿಸುತ್ತಿರುವ ಜನುಮದ ಸ್ನೇಹಿತರು ಚಿತ್ರದ ಪ್ರಥಮ ಪ್ರತಿ ಸಿದ್ಧವಾಗಿದ್ದು, ಇದೀಗ ಸೆನ್ಸಾರ್‌ ಮನೆಯಲ್ಲಿದೆ.

Advertisement

ಚಿತ್ರದಲ್ಲಿ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್‌ ಎಲ್ಲಾ ಒಂದೇ ಎಂಬ ಸಂದೇಶ ಸಾರುವ ಹಾಗೂ ಫ್ಯಾಕ್ಟರಿಯಲ್ಲಿ ಕಾರ್ಮಿಕ, ಮಾಲೀಕನ ಸುತ್ತ ಮುತ್ತ ನಡೆಯುವ ಕಥಾಹಂದರವಿರುವ ಈ ಚಿತ್ರ ಮುಂದಿನ ಜನವರಿ ತಿಂಗಳಲ್ಲಿ ತೆರೆಗೆ ಬರುವ ಸಾಧ್ಯತೆ ಇದೆ.

ಪರುಶುರಾಮ್‌ ನಾವಳ್ಳಿ ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಕೃಷ್ಣಸಾರಥಿ ಛಾಯಾಗ್ರಹಣ, ಎ.ರಾಜ್‌ ಕುಮಾರ್‌ ಸಂಗೀತ, ಶ್ರೀಧರ್‌ ಶೆಟ್ಟಿ ಚಿತ್ರಕಥೆ, ಸಂಭಾಷಣೆ ಹಾಗೂ ಸಹ ನಿರ್ದೇಶನ, ಜಗ್ಗು ನೃತ್ಯ ನಿರ್ದೇಶನ ಸುಪ್ರಿತ್‌ ಶಂಕರ್‌ ಸಂಕಲನವಿದೆ.

ಶೈಕ್‌ ಮುಕ್ತಿಯಾರ್‌, ರೋಹಿತ್‌ ಶೆಟ್ಟಿ, ಅಂಗಾರಿಕ, ಶ್ರೀಧರ್‌ ಶೆಟ್ಟಿ, ಮೂಗು ಸುರೇಶ್‌, ರವಿ, ಹರೀಶ್‌, ದೇವರಾಜ್‌, ನವೀನ್‌, ಪ್ರಭಾಕರ್‌, ವಿನೋದ್‌ ಇನ್ನೂ ಮುಂತಾದವರ ತಾರಾಬಳಗ ಚಿತ್ರದಲ್ಲಿದೆ. 

Advertisement

Udayavani is now on Telegram. Click here to join our channel and stay updated with the latest news.

Next