Advertisement

ಜನತಾ ದಳ ಹೋಳು; ಘಟಾನುಘಟಿಗಳ ಸೋಲು 

12:47 AM Mar 31, 2023 | Team Udayavani |

1989ರಲ್ಲಿ ಹೀಗೂ ಆಗಿತ್ತು. ಜನತಾ ದಳದಲ್ಲಿ ಆಗ ಎಚ್‌.ಡಿ.ದೇವೇಗೌಡರು, ಎಸ್‌.ಆರ್‌.ಬೊಮ್ಮಾಯಿ, ರಾಮಕೃಷ್ಣ ಹೆಗಡೆ ಅವರು ಪ್ರಮುಖ ನಾಯಕರು. ಆಗ ಸ್ವಪಕ್ಷೀಯ ನಾಯಕರ ಜತೆ ಮುನಿಸಿಕೊಂಡ ದೇವೇಗೌಡರು, ಜನತಾದಳದಿಂದ ಆಚೆ ಕಾಲಿಟ್ಟು, ಜನತಾ ಪಾರ್ಟಿ(ಜೆಪಿ) ಕಟ್ಟಿಕೊಂಡಿದ್ದರು.  ಇದರ ರಾಷ್ಟ್ರೀಯ ಅಧ್ಯಕ್ಷರು ಸುಬ್ರಮಣಿಯನ್‌ ಸ್ವಾಮಿ. 1989ರಲ್ಲಿ ನಡೆದ ಚುನಾವಣೆಯಲ್ಲಿ ಜನತಾ ದಳ ಮತ್ತು ಜನತಾ ಪಾರ್ಟಿ ಬೇರೆ ಬೇರೆಯಾಗಿಯೇ ಸ್ಪರ್ಧೆ ಮಾಡಿದ್ದವು. ವಿಶೇಷವೆಂದರೆ  ಹೊಳೆನರಸೀಪುರದಲ್ಲಿ ಸ್ಪರ್ಧೆ ಮಾಡಿದ್ದ ದೇವೇಗೌಡರೂ ಸೋತಿದ್ದರು.

Advertisement

ಈ ಚುನಾವಣೆಯಲ್ಲಿ ಜನತಾದಳ ಮತ್ತು ಜನತಾ ಪಾರ್ಟಿ ಎರಡೂ ಸೋತವು. ಜನತಾ ದಳ 209 ಕಡೆಗಳಲ್ಲಿ ಸ್ಪರ್ಧೆ ಮಾಡಿ ಕೇವಲ 24 ಸ್ಥಾನಗಳಲ್ಲಿ ಗೆದ್ದಿತು. ಆಗ ಸಿಎಂ ಆಗಿದ್ದ ಎಸ್‌.ಆರ್‌.ಬೊಮ್ಮಾಯಿ ಅವರೂ ಸೋತಿದ್ದರು. ಜನತಾ ಪಾರ್ಟಿ 217 ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಕೇವಲ 2ರಲ್ಲಿ ಮಾತ್ರ ಜಯಗಳಿಸಿತ್ತು. ಜನತಾ ದಳ ಮತ್ತು ಜನತಾ ಪಾರ್ಟಿ ಪ್ರತ್ಯೇಕವಾಗಿ ಸ್ಪರ್ಧೆ ಮಾಡಿದ್ದರಿಂದ ಮತ ಚಲ್ಲಾಪಿಲ್ಲಿಯಾಗಿದ್ದವು. ಹೀಗಾಗಿ ಕಾಂಗ್ರೆಸ್‌ ನಿರಾಯಾಸವಾಗಿ ಗೆಲುವು ಸಾಧಿಸಿತ್ತು. 221ರಲ್ಲಿ ಸ್ಪರ್ಧೆ ಮಾಡಿದ್ದ ಕಾಂಗ್ರೆಸ್‌ 178ರಲ್ಲಿ ಗೆದ್ದಿತ್ತು. ಮುಂದೆ ವೀರೇಂದ್ರ ಪಾಟೀಲ್‌ ಅವರು ಮುಖ್ಯಮಂತ್ರಿಯಾದರು. 1990ರಲ್ಲಿ ದೇವೇಗೌಡರು ಮತ್ತೆ ಜನತಾದಳಕ್ಕೆ ಬಂದರು.

Advertisement

Udayavani is now on Telegram. Click here to join our channel and stay updated with the latest news.

Next