Advertisement

ರಾಂಪುರಕ್ಕೆ ಜನಾರ್ದನರೆಡ್ಡಿ ನಿವಾಸ ಶಿಫ್ಟ್‌?

08:15 AM Feb 13, 2018 | Harsha Rao |

ಬಳ್ಳಾರಿ: ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಅಕ್ರಮ ಗಣಿಗಾರಿಕೆ ಆರೋಪ ಎದುರಿಸುತ್ತಿರುವ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ, ಬೆಂಗಳೂರಿನಿಂದ ಬಳ್ಳಾರಿಗೆ ತೀರ ಹತ್ತಿರದಲ್ಲಿರುವ ಚಿತ್ರದುರ್ಗ ಜಿಲ್ಲೆ ರಾಂಪುರಕ್ಕೆ ಶಿಪ್ಟ್ ಆಗಲಿದ್ದಾರೆ ಎಂದು ತಿಳಿದು ಬಂದಿದೆ.

Advertisement

ರೆಡ್ಡಿ ತಮ್ಮ ತವರು ಜಿಲ್ಲೆ ಬಳ್ಳಾರಿಗೆ ಹೋಗಲು ಸುಪ್ರಿಂಕೋರ್ಟ್‌ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ಹೀಗಾಗಿ, ಚುನಾವಣೆ ಸಂದರ್ಭದಲ್ಲಿ ಬಳ್ಳಾರಿ ಜಿಲ್ಲೆಯಲ್ಲಿ ತಮ್ಮ ಪ್ರಭಾವ ಬೀರಲು ಬೆಂಗಳೂರಿನ “ಪಾರಿಜಾತ’ ಅಪಾಟ್‌ ìಮೆಂಟ್‌ನಿಂದ ನಿವಾಸವನ್ನು ರಾಂಪುರಕ್ಕೆ ಸ್ಥಳಾಂತರಿಸಲು ಸದ್ದಿಲ್ಲದೆ ಸಿದಟಛಿತೆ ನಡೆಸಿದ್ದಾರೆಂಬ ಮಾಹಿತಿ ಹೊರಬಿದ್ದಿದೆ. ಬಿರುಗಾಳಿಯಂತೆ ರಾಜ್ಯ ರಾಜಕಾರಣ ಪ್ರವೇಶಿಸಿದ್ದ ರೆಡ್ಡಿ ಹಾಗೂ ಇವರ ಕುಟುಂಬ ಬಿಸಿಲುನಾಡಿನಲ್ಲಿ ಬಿಜೆಪಿಗೆ ಅಭೂತಪೂರ್ವ ಗೆಲುವು ತಂದುಕೊಟ್ಟಿತ್ತು. ರೆಡ್ಡಿ ತಮ್ಮ
ರಾಜಕೀಯ ತಂತ್ರಗಾರಿಕೆ ಮೂಲಕ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೇರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಹೀಗಾಗಿ ಇಡೀ ಜಿಲ್ಲೆಯಲ್ಲಿ ಇಂದಿಗೂ ಜನಾರ್ದನ ರೆಡ್ಡಿಯವರ ಹಿಡಿತ ಬಿಗಿಯಾಗಿಯೇ ಇದೆ. ಆದರೆ, ಜಿಲ್ಲೆ ಪ್ರವೇಶಿಸಲಾರದ ಅನಿವಾರ್ಯತೆಯಿಂದ 
ಈಗ ತಮ್ಮ ನಿವಾಸವನ್ನೇ ಬದಲಿಸಿಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ರೆಡ್ಡಿ ಅಕ್ರಮ ಗಣಿಗಾರಿಕೆ, ಗಡಿ ನಾಶ ಮುಂತಾದ ಆರೋಪ ಎದುರಿಸುತ್ತಿದ್ದಾರೆ. ಈ ಎಲ್ಲ ಪ್ರಕರಣಕ್ಕೆ ಸಂಬಂಧಿಸಿ ಕರ್ನಾಟಕದ ಬಳ್ಳಾರಿ, ಆಂಧ್ರಪ್ರದೇಶದ ಅನಂತಪುರ ಹಾಗೂ ಕಡಪಾ ಜಿಲ್ಲೆಗಳಲ್ಲಿ ಪ್ರವೇಶ ನಿರ್ಬಂಧಿಸಿ ಸುಪ್ರೀಂಕೋರ್ಟ್‌ ಆದೇಶಿಸಿದೆ. ಹೀಗಾಗಿ,
ಒಂದು ದಿನ ಬಳ್ಳಾರಿಗೆ ತೆರಳಬೇಕೆಂದರೂ ನ್ಯಾಯಾಲಯದ ಅನುಮತಿ ಕಡ್ಡಾಯವಾಗಿದೆ. ಬಿಜೆಪಿಗೆ ಮತ್ತೆ ಬಲ ತುಂಬಲು ಹಾಗೂ ತೆರೆಮರೆಯಲ್ಲಿ ರಾಜಕೀಯ ನಡೆಸಲು ರೆಡ್ಡಿ ಅವರು ತಮ್ಮ ನಿವಾಸವನ್ನು ಬದಲಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.  

Advertisement

Udayavani is now on Telegram. Click here to join our channel and stay updated with the latest news.

Next