Advertisement

Album Song; ಅಯೋಧ್ಯೆ ಶ್ರೀರಾಮನಿಗೆ ‘ಜಾನಕಿರಾಮ’ ಗೀತಾರ್ಪಣೆ

04:58 PM Jan 22, 2024 | Team Udayavani |

ಅಯೋಧ್ಯೆಯಲ್ಲಿ ಬಾಲರಾಮನ ಪ್ರತಿಷ್ಠಾಪನೆ ಆಗುತ್ತಿರುವ ಸಂದರ್ಭದಲ್ಲಿ “ಸಿರಿ ಮ್ಯೂಸಿಕ್‌’ ಹಾಗೂ “ಗೆಜ್ಜೆ ಡ್ಯಾನ್ಸ್‌ ಸ್ಟುಡಿಯೋ’ ಸಹಯೋಗದಲ್ಲಿ ಮೂಡಿ ಬಂದಿರುವ “ಜಾನಕಿ ರಾಮ’ ಆಲ್ಬಂ ಸಾಂಗ್‌ ಬಿಡುಗಡೆಯಾಯಿತು.

Advertisement

ಸುರಪುರದ ಶಾಸಕ ರಾಜುಗೌಡ, ಡಿ. ಎಸ್‌ ಮ್ಯಾಕ್ಸ್‌ನ ಎಂ. ಡಿ ದಯಾನಂದ್‌, ಫಿಲಂ ಚೇಂಬರ್‌ ಅಧ್ಯಕ್ಷ ಎನ್‌. ಎಂ. ಸುರೇಶ್‌, ಮಾಜಿ ಅಧ್ಯಕ್ಷ ಭಾ. ಮ. ಹರೀಶ್‌, ಕರ್ನಾಟಕ ಚಲನಚಿತ್ರ ನಿರ್ಮಾಪಕ ಸಂಘದ ಅಧ್ಯಕ್ಷ ಉಮೇಶ್‌ ಬಣಕಾರ್‌, ನಟಿ ಪ್ರಿಯಾಂಕಾ ಉಪೇಂದ್ರ, ಪೊಲೀಸ್‌ ಅಧಿಕಾರಿ ಶಂಕರ್‌, “ಸಿರಿ ಮ್ಯೂಸಿಕ್‌’ನ ಸುರೇಶ್‌ ಚಿಕ್ಕಣ್ಣ, ನಟಿ ರೂಪಿಕಾ ಸೇರಿದಂತೆ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಹಾಜರಿದ್ದು “ಜಾನಕಿ ರಾಮ’ ಆಲ್ಬಂ ಸಾಂಗ್‌ ಬಿಡುಗಡೆ ಮಾಡಿದರು.

ಅದ್ದೂರಿ ಸೆಟ್‌ನಲ್ಲಿ ಈ ಹಾಡನ್ನು ಚಿತ್ರಿಸಲಾಗಿದ್ದು, ನಟ ಅನಿರುದ್ಧ್ ಜತ್ಕರ್‌, ನಿರಂಜನ ದೇಶಪಾಂಡೆ ಈ ಹಾಡನಲ್ಲಿ ಅಭಿನಯಿಸಿದ್ದಾರೆ. ಅದ್ವೈತ್‌ ಶೆಟ್ಟಿ ನಿರ್ದೇಶಿಸಿರುವ ಈ ಹಾಡನ್ನು ಮನೋಜ್‌ ಸೌಗಂಧ್‌ ಬರೆದಿದ್ದಾರೆ. ನೀತು ನಿನಾದ್‌ ತಾವೇ ಈ ಹಾಡಿಗೆ ಸಂಗೀತ ಸಂಯೋಜಿಸಿ, ಧ್ವನಿಯಾಗಿದ್ದಾರೆ.

ನಟಿ ರೂಪಿಕಾ ಕ್ರಿಯೇಟಿವ್‌ ಡೈರೆಕ್ಟರ್‌ ಆಗಿ ಕಾರ್ಯ ನಿರ್ವಹಿಸುವುದರ ಜೊತೆಗೆ, ಲಿಖೀತ್‌ ಆಚಾರ್‌ ಜೊತೆಗೂಡಿ ನೃತ್ಯ ನಿರ್ದೇಶನವನ್ನು ಮಾಡಿದ್ದಾರೆ. ಕಾರ್ಯಕ್ರಮದಲ್ಲಿ ಹಾಜರಿದ್ದ ಹಾಡಿನಲ್ಲಿ ಅಭಿನಯಿಸಿದ ಕಲಾವಿದರು ಮತ್ತು ತಂತ್ರಜ್ಞರು “ಜಾನಕಿ ರಾಮ’ ಗೀತೆಯ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next