Advertisement

ಜ. 21-26 ಅತ್ತೂರು ಜಾತ್ರೆ; ಸರ್ವಧರ್ಮ ಏಕತೆಯ ಹಬ್ಬ: ಆಲ್ಬನ್‌ ಡಿ’ಸೋಜಾ

11:10 PM Jan 13, 2024 | Team Udayavani |

ಕಾರ್ಕಳ: ಸಂತ ಲಾರೆನ್ಸ್‌ ಪುಣ್ಯ ಕ್ಷೇತ್ರ ಅತ್ತೂರು ಬಸಿಲಿಕಾದ ವಾರ್ಷಿಕ ಮಹೋತ್ಸವ (ಅತ್ತೂರು ಜಾತ್ರೆ) ಜ. 21ರಿಂದ 26ರ ವರೆಗೆ ಸರ್ವಧರ್ಮ ಏಕತೆಯ ಹಬ್ಬವಾಗಿ ನಡೆಯಲಿದೆ ಎಂದು ಬಸಿಲಿಕಾದ ಧರ್ಮಗುರು ವಂ| ಆಲ್ಬನ್‌ ಡಿ’ಸೋಜಾ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

Advertisement

“ಕೇಳಿರಿ ನಿಮಗೆ ಕೊಡಲಾಗುವುದು’ ಎಂಬ ವಿಷಯದೊಂದಿಗೆ ನಡೆಯುವ 6 ದಿನಗಳ ಈ ಉತ್ಸವದಲ್ಲಿ ಕೊಂಕಣಿ ಭಾಷೆಯಲ್ಲಿ 45, ಕನ್ನಡದಲ್ಲಿ 3 ಸೇರಿದಂತೆ ಒಟ್ಟು 48 ಬಲಿ ಪೂಜೆಗಳು ನಡೆಯಲಿವೆ. ಜ. 21ರ ಸಂಜೆ 4.30ಕ್ಕೆ (ಕೊಂಕಣಿ) ಮಂಗಳೂರಿನ ನಿವೃತ್ತ ಧರ್ಮಾಧ್ಯಕ್ಷ ರೈ| ರೆ| ಡಾ| ಅಲೋಶಿಯಸ್‌ ಪಾವ್‌É ಡಿ’ಸೋಜಾ, ಜ. 22ರಂದು ಸಂಜೆ 6ಕ್ಕೆ (ಕನ್ನಡ) ಶಿವಮೊಗ್ಗದ ಧರ್ಮಾಧ್ಯಕ್ಷ ರೈ| ರೆ| ಡಾ| ಫ್ರಾನ್ಸಿಸ್‌ ಸೆರಾವೊ, ಜ. 23ರಂದು ಸಂಜೆ 5.30ಕ್ಕೆ (ಕನ್ನಡ) ಪುತ್ತೂರಿನ ಧರ್ಮಾಧ್ಯಕ್ಷ ರೈ| ರೆ| ಡಾ| ಗೀವರ್ಗೀಸ್‌ ಮಾರ್‌ ಮಕಾರಿಯೋಸ್‌, ಜ. 24ರ ಬೆಳಗ್ಗೆ 10ಕ್ಕೆ (ಕೊಂಕಣಿ) ಉಡುಪಿಯ ಧರ್ಮಾಧ್ಯಕ್ಷ ರೈ| ರೆ| ಡಾ| ಜೆರಾಲ್ಡ್‌ ಐಸಾಕ್‌ ಲೋಬೊ, ಜ. 25ರ ಬೆಳಗ್ಗೆ 10 (ಕೊಂಕಣಿ) ಮಂಗಳೂರಿನ ಧರ್ಮಾಧ್ಯಕ್ಷ ರೈ| ರೆ| ಡಾ| ಪೀಟರ್‌ ಪಾವ್‌É ಸಲ್ಡಾನ್ಹಾ ನೆರವೇರಿಸುವರು. ಜ. 26ರಂದು ಬೆಳಗ್ಗೆ 10ಕ್ಕೆ ಅಸ್ವಸ್ಥರು ಹಾಗೂ ಮಕ್ಕಳಿಗಾಗಿ ವಿಶೇಷ ಪ್ರಾರ್ಥನೆ ನಡೆಯಲಿದೆ. ಬಳಿಕ ಬೆಳ್ತಂಗಡಿ ಧರ್ಮಾಧ್ಯಕ್ಷ ರೈ| ರೆ| ಡಾ| ಲಾರೆನ್ಸ್‌ ಮುಕ್ಕುಯಿ ಪ್ರಧಾನ ಯಾಜಕರಾಗಿ ಪ್ರಮುಖ ಬಲಿಪೂಜೆ (ಕನ್ನಡ) ನೆರವೇರಿಸಲಿರುವರು.

ಫಾ| ರೋಮನ್‌ ಮಸ್ಕರೇನಸ್‌, ಲೋರಿಯೋ ಪಿಂಟೋ, ಪಾಲನಾ ಮಂಡಳಿ ಉಪಾಧ್ಯಕ್ಷ ಸಂತೋಷ್‌ ಡಿ’ಸಿಲ್ವ, ಕಾರ್ಯದರ್ಶಿ ರೊನಾಲ್ಡ್‌ ನೊರೊನ್ಹಾ, ಸದಸ್ಯರಾದ ವಂದೀಶ್‌ ಮಥಾಯಿಸ್‌, ಪ್ರಕಾಶ್‌ ಪಿಂಟೋ, ರಿತೇಶ್‌ ಪಿಂಟೋ, ರೋಶನ್‌ ಸಾಲಿ ಪತ್ರಿಕಾಗೋಷ್ಠಿಯಲ್ಲಿದ್ದರು.

6 ದಿನಗಳಿಗೆ ವಿಸ್ತರಣೆ
ಆರಂಭದಲ್ಲಿ 3 ದಿನ ಬಲಿಪೂಜೆ ನಡೆಯುತ್ತಿತ್ತು. ಬಳಿಕ 4ರಿಂದ 5ಕ್ಕೆ ಹೆಚ್ಚಿಸುತ್ತ ಬರಲಾಗಿತ್ತು. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವುದರಿಂದ ಒತ್ತಡ ನಿರ್ವಹಣೆ ದೃಷ್ಟಿಯಿಂದ ಈ ಬಾರಿ 6 ದಿನ ಬಲಿಪೂಜೆ ನಡೆಸಲಾಗುತ್ತಿದೆ. ಜ. 14ರಂದು ವಿಶೇಷ ಪೂಜೆ ಮೆರವಣಿಗೆ ನಡೆಯಲಿದೆ. ಶಾಸಕ ಸುನಿಲ್‌ ಕುಮಾರ್‌ ಮೆರವಣಿಗೆಗೆ ಚಾಲನೆ ನೀಡುವರು. ಜ. 20ರಂದು ಮೆರವಣಿಗೆ, ವಿಶೇಷ ಬಲಿಪೂಜೆ ನಡೆಯಲಿದೆ. 2025 ಅನ್ನು ಪ್ರಾರ್ಥನ ವರ್ಷವಾಗಿ ಆಚರಿಸಲಾಗುತ್ತಿದೆ ಎಂದು ಧರ್ಮಗುರುಗಳು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next