Advertisement

ಶ್ರೀನಗರ: ಸೇನಾ ಗುಂಡಿಗೆ ಮೂವರು ಉಗ್ರರು ಫಿನಿಶ್‌, ಯೋಧನಿಗೆ ಗಾಯ 

09:11 AM Aug 05, 2017 | |

ಶ್ರೀನಗರ: ಸೋಪುರ್‌ನಲ್ಲಿ ಸೇನಾ ಪಡೆಗಳು  ಶನಿವಾರ ಬೆಳಗಿನ ಜಾವ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಮೂವರು ಲಷ್ಕರ್‌-ಇ-ತೋಯ್ಬಾ ಉಗ್ರರನ್ನು ಹತ್ಯೆಗೈಯಲಾಗಿದೆ. ಕಾರ್ಯಾಚರಣೆ ವೇಳೆ ಓರ್ವ ಪೊಲೀಸ್‌ ಸಿಬಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

Advertisement

ಉಗ್ರರ ಅಡಗುದಾಣದ ಮೇಲೆ  ನಸುಕಿನ 4.30 ರ ವೇಳೆಗೆ ಸಿಆರ್‌ಪಿಎಫ್ ನ 179 ನೇ ಬೆಟಾಲಿಯನ್‌, 52 ನೇ ರಾಷ್ಟ್ರೀಯ ರೈಫ‌ಲ್ಸ್‌,ವಿಶೇಷ ಕಾರ್ಯಾಚರಣೆ ಪಡೆ ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ನಡೆಸಿದ್ದಾರೆ.

ಗುಂಡಿನ ಚಕಮಕಿಯಲ್ಲಿ  ಪೊಲೀಸ್‌ ಸಿಬಂದಿ ಗಾಯಗೊಂಡಿರುವುದಾಗಿ ಉತ್ತರ ಕಾಶ್ಮೀರದ ಐಜಿಪಿ ನಿತೀಶ್‌ ಕುಮಾರ್‌ ಟ್ವೀಟ್‌ ಮಾಡಿದ್ದಾರೆ. 

ಹೆಚ್ಚಿನ ವಿವರ ನಿರೀಕ್ಷಿಸಲಾಗುತ್ತಿದೆ. 

Advertisement

Udayavani is now on Telegram. Click here to join our channel and stay updated with the latest news.

Next